ಎಸ್ಡಿಪಿಐ ಎರಡನೇ ಪಟ್ಟಿ ಬಿಡುಗಡೆ-ಪುತ್ತೂರಿನಿಂದ ಶಾಫಿ ಬೆಳ್ಳಾರೆ ಕಣಕ್ಕೆ

0

ಪುತ್ತೂರು : ರಾಜ್ಯ ವಿದಾನಸಭಾ ಚುನಾವಣೆಗೆ ಎಸ್ಡಿಪಿಐ ಪಕ್ಷ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ಎಮ್‌ ಕೆ ಫೈಜಿ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, 9 ಮಂದಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದಾರೆ. ಅದರಂತೆ ಪುತ್ತೂರಿನಲ್ಲಿ ಶಾಫಿ ಬೆಳ್ಳಾರೆ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು ಉಳಿದಂತೆ, ರಾಯಚೂರಿನಿಂದ ಸಹೀದ್‌ ಇಸಾಕ್‌ ಉಸೇನ್‌, ತೇರದಾಳದಿಂದ ಯಮನಪ್ಪ ಗುಣದಾಳ್‌, ಮೂಡಿಗೆರೆಯಿಂದ ಅಂಗಡಿ ಚಂದು, ಬಿಜಾಪುರ ನಗರದಿಂದ ಅತಾವುಳ್ಳ ದ್ರಾಕ್ಷಿ, ಮಂಗಳೂರು ಉಳ್ಳಾಲದಿಂದ ರಿಯಾಝ್‌ ಫರಂಗಿಪೇಟೆ, ಕಲಬುರ್ಗಿ ಉತ್ತರದಿಂದ ರಹೀಮ್‌ ಪಟೇಲ್‌, ಮತ್ತು ಹುಬ್ಬಳ್ಳಿ ಪೂರ್ವದಿಂದ ಡಾ. ವಿಜಯ್‌ ಎಮ್‌ ಗುಂದ್ರಾಲ್‌ ಹೆಸರುಗಳನ್ನು ಘೋಷಿಸಲಾಗಿದೆ.

LEAVE A REPLY

Please enter your comment!
Please enter your name here