ವಿಧಾನಸಭಾ ಸಾರ್ವತ್ರಿಕ ಚುನಾವಣೆ -2023; ಚುನಾವಣಾ ನಿಯುಕ್ತಿಗೊಂಡ ಅಧಿಕಾರಿಗಳು ರಜೆ ಮಾಡದಿರಲು ಸೂಚನೆ

0

ಪುತ್ತೂರು: ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023 ಕ್ಕೆ ಸಂಬಂಧಿಸಿ ಕಾರ್ಯಗಳಿಗೆ ನಿಯುಕ್ತಿಗೊಳಿಸಿದ ಅಧಿಕಾರಿಗಳಿಗೆ ಚುನಾವಣಾ ಕೆಲಸ ಕಾರ್ಯ ಮುಕ್ತಾಯವಾಗುವ ತನಕ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಸ್ವತಃ ಯಾವುದೇ ರೀತಿಯ ರಜೆ ಮಾಡದಂತೆ ಮತ್ತು ಕಡ್ಡಾಯವಾಗಿ ಚುನಾವಣೆ ಕಾರ್ಯವನ್ನು ನಿರ್ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗು ಜಿಲ್ಲಾಧಿಕಾರಿ ರವಿಕುಮಾರ್ ಎಮ್.ಆರ್ ಅವರು ಸೂಚನೆ ನೀಡಿದ್ದಾರೆ.

ನಿಯುಕ್ತಿಗೊಂಡ ಅಧಿಕಾರಿಗಳು ಚುನಾವಣಾ ಕೆಲಸ ಕಾರ್ಯ ಮುಕ್ತಾಯವಾಗುವ ತನಕ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಸ್ವತಃ ಯಾವುದೇ ರೀತಿಯ ರಜೆಯನ್ನು (ಸಾಂದರ್ಭಿಕ/ ಪರಿವರ್ತಿತ) ಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳ ಪೂರ್ವಾನುಮತಿ ಇಲ್ಲದೆ ರಜೆಯನ್ನು ಮಂಜೂರು ಮಾಡತಕ್ಕದಲ್ಲ ಎಂದು ಇಲಾಖಾ ಮುಖ್ಯಸ್ಥರುಗಳಿಗೆ ಸೂಚನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here