ಪುತ್ತೂರಿಗೆ ಶ್ರೀಮತಿ ರಾಗವಿ ವಿನೋದ ನಾಯಕ ಬದಲು ತಹಶೀಲ್ದಾರ್ ಆಗಿ ಜೆ.ಶಿವಶಂಕರ್ ವರ್ಗಾವಣೆ

0

ಪುತ್ತೂರು : ಪುತ್ತೂರು ತಹಶೀಲ್ದಾರ್ ಆಗಿ ವರ್ಗಾವಣೆ ಆದೇಶಗೊಂಡಿದ್ದ ಬೆಂಗಳೂರಿನ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯದ ಯೋಜನಾಧಿಕಾರಿಯಾಗಿದ್ದ ಶ್ರೀಮತಿ ರಾಗವಿ ವಿನೋದ ನಾಯಕ ಅವರ ವರ್ಗಾವಣೆ ಆದೇಶ ರದ್ದು ಪಡಿಸಿ ಬದಲಿಗೆ ಬೀಮರಾಯನಗುಡಿ ಎಸ್.ಎಲ್.ಎ.ಒ ಕಚೇರಿಯ ಕಂದಾಯ ಅಧಿಕಾರಿ ಜೆ ಶಿವಶಂಕರ್ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಭಾರತ ಚುನವಣಾ ಆಯೋಗದ ಮಾರ್ಗಸೂಚಿ ಅನ್ವಯ ಖಾಲಿ ಇರುವ ಹುದ್ದೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು, ಸ್ಥಳ ನಿಯುಕ್ತಿಗೊಳಿಸಿ, ವರ್ಗಾಯಿಸಿ ಕಂದಾಯ ಇಲಾಖೆ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಪುತ್ತೂರಿನ ತಹಶೀಲ್ದಾರ್ ಹುದ್ದೆ ಖಾಲಿಯಾಗಿದ್ದು, ಬೆಂಗಳೂರಿನಲ್ಲಿ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯದ ಯೋಜನಾಧಿಕಾರಿಯಾಗಿದ್ದ (ತಹಶೀಲ್ದಾರ್ ಗ್ರೇಡ್ 2) ಶ್ರೀಮತಿ ರಾಗವಿ ವಿನೋದ ನಾಯಕ ಇವರನ್ನು ಪುತ್ತೂರು ಗ್ರೇಡ್ 1 ತಹಶೀಲ್ದಾರ್ ಆಗಿ ನಿಯುಕ್ತಿಗೊಳಿಸಿ ವರ್ಗಾಯಿಸಿ ಆದೇಶಿಸಿಸಲಾಗಿತ್ತು. ಆದರೆ ಇದೀಗ ರಾಗವಿ ವಿನೋದ ಅವರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿ ಅದರ ಬದಲಿಗೆ ಗ್ರೇಡ್ 1 ತಹಸೀಲ್ದಾರ್ ಆಗಿ ಬೀರಮರಾಯನಗುಡಿ ಎಸ.ಎಲ್.ಎ.ಓ ಕಚೇರಿ ಕಂದಾಯ ಅಧಿಕಾರಿ (ತಹಶೀಲ್ದಾರ್ ಗ್ರೇಡ್ -2) ಜೆ.ಶಿವಶಂಕರ್ ಅವರನ್ನು ವರ್ಗಾಯಿಸಲಾಗಿದೆ.

LEAVE A REPLY

Please enter your comment!
Please enter your name here