ಕಬಕ ವಿದ್ಯಾಪುರದಲ್ಲಿ ಗುಡ್ಡಕ್ಕೆ ಬೆಂಕಿ

0

ಪುತ್ತೂರು: ಕಬಕ ಗ್ರಾ.ಪಂ ವ್ಯಾಪ್ತಿಯ ವಿದ್ಯಾಪುರ ಎರಡನೇ ಅಡ್ಡರಸ್ತೆಯಲ್ಲಿರುವ ಹಿಂದು ರುದ್ರಭೂಮಿ ಹಾಗೂ ತ್ಯಾಜ್ಯ ವಿಲೇವಾರಿ ಘಟಕದ ಬಳಿಯ ಸರಕಾರಿ ಗುಡ್ಡಕ್ಕೆ ಬೆಂಕಿ ಬಿದ್ದಿರುವ ಘಟನೆ ಮಾ.4ರಂದು ಮಧ್ಯಾಹ್ನ ನಡೆದಿದೆ.

ಘಟನೆಯಿಂದಾಗಿ ಸುಮಾರು 5 ಎಕರೆಗೂ ಅಧಿಕ ಜಾಗ ಬೆಂಕಿಗಾಹುತಿಯಾಗಿದೆ. ಪಂಚಾಯತ್‌ನ ಹಿಂದು ರುದ್ರಭೂಮಿ ಹಾಗೂ ಘನ ತ್ಯಾಜ್ಯ ವಿಲೇವಾರಿ ಘಟಕಗಳಿಗೂ ಹನಿ ಸಂಭವಿಸಿದೆ.

ಸಂಜೆ ತನಕ ಬಾರದ ಅಗ್ನಿಶಾಮಕ:
ಗುಡ್ಡಕ್ಕೆ ಬೆಂಕಿ ಬಿದ್ದಿರುವ ಬಗ್ಗೆ ಸ್ಥಳೀಯರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲು ಕರೆ ಮಾಡಿದಾಗ ವಾಹನ ಬೇರೆ ಕಡೆ ಬೆಂಕಿ ನಂದಿಸಲು ತೆರಳಿರುವುದಾಗಿ ತಿಳಿಸಿದ್ದಾರೆ. ನಂತರ ಸಂಪರ್ಕಿಸಿದಾಗ ವಾಹನವು ಮೊಟ್ಟೆತ್ತಡ್ಕಕ್ಕೆ ಹೋಗಿ ನೀರು ತುಂಬಿಸಿ ಬರುವುದಾಗಿ ಇಲಾಖೆಯವರು ತಿಳಿಸಿದ್ದರೂ ಅಗ್ನಿಶಾಮಕ ವಾಹನ ಸಂಜೆ ತನಕವೂ ಬರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here