ಬಪ್ಪಳಿಗೆ : ಮಾದಕದ್ರವ್ಯ ಸೇವಿಸಿ ಅನುಚಿತ ವರ್ತನೆ – ಕಲ್ಲೇಗದ ಮಹಮ್ಮದ್ ಆರೀಸ್ ವಿರುದ್ಧ ಪ್ರಕರಣ ದಾಖಲು

0

ಪುತ್ತೂರು: ಬಪ್ಪಳಿಗೆ ನೆಲ್ಲಿಗುಂಡಿ ಬಳಿ ಮಾದಕದ್ರವ್ಯ ಗಾಂಜಾ ಸೇವಿಸಿ ಅನುಚಿತವಾಗಿ ವರ್ತಿಸಿದ ಕಬಕದ ವ್ಯಕ್ತಿಯೊಬ್ವರ ವಿರುದ್ಧ ಗಾಂಜಾ ಸೇವನೆ ಪ್ರಕರಣವನ್ನು ಪುತ್ತೂರು ಪೊಲೀಸರು ದಾಖಲಿಸಿದ್ದಾರೆ.ಮೂಲತಃ ಕಬಕ ನಿವಾಸಿಯಾಗಿದ್ದು ಪ್ರಸ್ತುತ ಕಲ್ಲೇಗ‌ ಮಸೀದಿ ಬಳಿಯ ಮಹಮ್ಮದ್ ಆರೀಸ್ (32.ವ) ಬಂಧಿತ ಆರೋಪಿ.

ಪುತ್ತೂರು ನಗರ ಪೊಲೀಸ್ ಠಾಣೆ ಎಸ್.ಐ ಶ್ರೀಕಾಂತ್ ರಾಥೋಡ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿದ್ದ ಸಂದರ್ಭ ಬಪ್ಪಳಿಗೆ ನೆಲ್ಲಿಗುಂಡಿ ಸಮೀಪ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಒಬ್ಬ ವ್ಯಕ್ತಿ ಅನುಚಿತವಾಗಿ ವರ್ತಿಸುತ್ತ ಸಾರ್ವಜನಿಕರನ್ನು ಉದ್ದೇಶಿಸಿ ಹೀನಾಯವಾಗಿ ಮಾತನಾಡುತ್ತಾ ತೊಂದರೆ ನೀಡುತ್ತಿರುವುದಾಗಿ ಬಂದ ಮಾಹಿತಿ ಪ್ರಕಾರ ಅಲ್ಲಿಗೆ ಹೋದಾಗ ಅನುಚಿತವಾಗಿ ವರ್ತಿಸುತ್ತ ಸಾರ್ವಜನಿಕರಿಗೆ ಮುಜುಗರ ಉಂಟು ಮಾಡುವ ರೀತಿಯಲ್ಲಿ ವರ್ತಿಸುತ್ತಿರುವುದು ಕಂಡು ಬಂದಂತೆ ಆತನನ್ನು ವಿಚಾರಿಸಿದಾಗ ಕಲ್ಲೇಗದ ಮಹಮ್ಮದ್ ಆರೀಸ್ ಎಂದು ತಿಳಿಸಿದಂತೆ ಆತನನ್ನು ಮಂಗಳೂರು, ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಮಾದಕ ದ್ರವ್ಯ ಸೇವನೆ ಪರೀಕ್ಷೆಗೆ ಹಾಜರು ಪಡಿಸಿದಾಗ ಆತ ಮಾದಕ ದ್ರವ್ಯ ಸೇವಿಸಿದ ಕುರಿತು ವೈಧ್ಯಕೀಯ ದೃಢಪತ್ರ ನೀಡಿದಂತೆ ಆರೋಪಿ ವಿರುದ್ಧ ಗಾಂಜಾ ಸೇವನೆ ಪ್ರಕರಣ ದಾಖಲು ಮಾಡಲಾಗಿದೆ.

LEAVE A REPLY

Please enter your comment!
Please enter your name here