ಕೌಡಿಚ್ಚಾರು: ಬೈಕ್ ಡಿಕ್ಕಿ – ಪಾದಾಚಾರಿ ಮೃತ್ಯು

0

ಪುತ್ತೂರು: ಬೈಕ್ ಡಿಕ್ಕಿಯಾಗಿ ಪಾದಾಚಾರಿಯೊಬ್ಬರು ಮೃತಪಟ್ಟ ಘಟನೆ ಮಾ.6ರಂದು ರಾತ್ರಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಕೌಡಿಚ್ಚಾರಿನಲ್ಲಿ ನಡೆದಿದೆ.
ಮಾಡ್ನೂರು ಗ್ರಾಮದ ಕುಂಞಕುಮೇರು ನಿವಾಸಿ ನಾರಾಯಣ ನಾಯ್ಕ್ (49ವ) ಎಂಬವರು ಮೃತಪಟ್ಟವರು.

ಅವರು ಮತ್ತು ಅವರ ಸಹೋದರ ಬಾಲಕೃಷ್ಣ ನಾಯ್ಕ್ ಅವರು ರಾತ್ರಿ ಮನೆ ಕಡೆ ಅರಿಯಡ್ಕ ಗ್ರಾಮದ ಕೌಡಿಚ್ಚಾರಿನಲ್ಲಿ ರಸ್ತೆ ಬದಿ ನಡೆದು ಕೊಂಡು ಸಿಆರ್‌ಸಿ ಕಾಲೋನಿ ತಲಪಿದಾಗ ಸುಳ್ಯ ಕಡೆಯಿಂದ ಬರುತ್ತಿದ್ದ ಬೈಕ್ ನಾರಾಯಣ ನಾಯ್ಕ ಅವರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ನಾರಾಯಣ ನಾಯ್ಕ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಬೈಕ್ ಸವಾರ ಗುರುಪ್ರಸಾದ್ ಅವರಿಗೂ ಗಾಯವಾಗಿತ್ತು.

ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರದೊಯ್ದಾಗಲೇ ನಾರಾಯಣ ನಾಯ್ಕ ಅವರು ಮೃತಪಟ್ಟಿದ್ದರು. ಗುರುಪ್ರಸಾದ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆ ಕುರಿತು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here