ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ವಿರುದ್ಧ ಧಾರ್ಮಿಕ ದತ್ತಿ ಇಲಾಖೆಗೆ ನೀಡಿದ ದೂರನ್ನು ಹಿಂಪಡೆಯಲಿದ್ದೇನೆ – ಜಗದೀಶ್ ಭಂಡಾರಿ

0

ಪುತ್ತೂರು: ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ವಿರುದ್ಧ ಧಾರ್ಮಿಕ ದತ್ತಿ ಇಲಾಖೆಗೆ ನನ್ನ ಅರಿವಿಗೆ ಬಾರದೆ ದೂರು ನೀಡಲಾಗಿದೆ. ನಾನು ಅರ್ಜಿಯನ್ನು ಓದದೆ ಸಹಿ ಹಾಕಿರುವುದು ನನ್ನಿಂದ ತಪ್ಪಾಗಿದೆ. ಇದೀಗ ದೂರಿನ ಅರಿವಾದ ಹಿನ್ನೆಲೆಯಲ್ಲಿ ನಾನು ದೂರನ್ನು ಹಿಂಪಡೆಯಲಿದ್ದೇನೆ ಎಂದು ನರಿಮೊಗರು ನಿವಾಸಿ ಜಗದೀಶ್ ಭಂಡಾರಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಹೆಸರು ಹೇಳಲು ಇಚ್ಚಿಸದ ಮೂರು ಮಂದಿಯ ಕುಮ್ಮಕ್ಕಿನಿಂದ ನನ್ನ ಸಹಿ ಪಡೆಯಲಾಗಿದ್ದು, ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಮೂವರು ವ್ಯಕ್ತಿಗಳು ಅಕ್ರಮ ಕೂಟ ಕಟ್ಟಿಕೊಂಡು ಹಿಂದೂ ಸಮಾಜದಲ್ಲಿ ಶಾಂತಿ ಭಂಗ ಮಾಡುತ್ತಿದ್ದಾರೆ.

ಸಮಾಜದ ನಂಬಿಕೆಗೆ ದ್ರೋಹ ಬಗೆಯುವ ಕಾರ್ಯವನ್ನು ಮಾಡಲಾಗುತ್ತಿದೆ. ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದಲ್ಲಿ ಆಡಳಿತ ವ್ಯವಸ್ಥೆ ಮತ್ತು ಅಭಿವೃದ್ಧಿ ಕೆಲಸಗಳು ಸಾಂಗವಾಗಿ ನಡೆಯುತ್ತಿದ್ದು, ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ವಿರೋಧಗಳಿಲ್ಲ ಎಂದವರು ಹೇಳಿದರು.

LEAVE A REPLY

Please enter your comment!
Please enter your name here