ಒಳಿತು ಮಾಡು ಮನುಷ್ಯ ತಂಡದಿಂದ ಕಿಟ್ ವಿತರಣೆ

0

ಪುತ್ತೂರು: ಪುತ್ತೂರು ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಜೆಸಿಐ ಪುತ್ತೂರು, ಲಯನ್ಸ್ ಕ್ಲಬ್, ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ ಇದರ ಸಹಯೋಗದೊಂದಿಗೆ ನೇತ್ರದಾನ ನೋಂದಣಿ, ಉಚಿತ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ ಹಾಗೂ ಊರ ಪರವೂರ ಸಹೃದಯಿ ದಾನಿಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಶಕ್ತರಿಗೆ ನಿರಂತರವಾಗಿ ಆಹಾರ ಸಾಮಗ್ರಿಗಳ ಕಿಟ್ ನೀಡುವ 21ನೇ ಯೋಜನೆ ’ಒಳಿತು ಮಾಡು ಮನುಷ’ ಕಾರ್ಯಕ್ರಮ ಮಾ.5 ರಂದು ಪುತ್ತೂರಿನ ಸೈನಿಕ ಭವನ ರಸ್ತೆಯಲ್ಲಿರುವ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ಲಯನ್ಸ್ ಕ್ಲಬ್‌ನ ಅಧ್ಯಕ್ಷ ಕೇಶವ ನಾಯ್ಕ್ ಸಾಲ್ಮರ ಮಾತಾನಾಡಿ ಈ ಸಂಸ್ಥೆಯು ಉತ್ತಮವಾಗಿ ಬೆಳೆಯಲಿ, ಬಹಳ ಒಳ್ಳೆಯ ಕೆಲಸವನ್ನು ಮಾಡುತ್ತಿದೆ ಇನ್ನು ಒಳ್ಳೆಯ ಕೆಲಸ ಮಾಡಲಿ ಎಂದು ಹಾರೈಸುತ್ತಾ ಯಶಸ್ವಿನಿ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಒಳಿತು ಮಾಡು ಮನುಷ(ರಿ) ಬೆಂಗಳೂರು ಇದರ ಸದಸ್ಯರಾದ ಹಾಲಿ ಪರ್ಲಡ್ಕರವರು ಮಾತನಾಡಿ ಒಳಿತು ಮಾಡು ಮಾನುಷ ತಂಡ ಪುತ್ತೂರಿನಲ್ಲಿ ಕೂಡ ಇದೆ ಎಂದು ತಿಳಿದು ತುಂಬಾ ಸಂತೋಷವಾಯಿತು. ಇನ್ನೂ ಕೂಡ ಈ ಸಂಸ್ಥೆಯು ಮುಂದುವರಿಯಬೇಕು. ಬಡ ಜನರಿಗೆ ಪ್ರಯೋಜನ ಆಗಬೇಕು. ಯಾವಾಗಲೂ ನಾನು ಈ ಸಂಸ್ಥೆಗೆ ಒಳ್ಳೆಯದನ್ನೇ ಆಶಿಸುತ್ತೇನೆ ಎಂದು ತಂಡಕ್ಕೆ ಶುಭ ಹಾರೈಸಿದರು. ಕಿಡ್ನಿ ವೈಫಲ್ಯ, ಕ್ಯಾನ್ಸರ್ ಹಾಗೂ ಬೆನ್ನು ಮೂಳೆ ಮುರಿತಕ್ಕೆ ಒಳಗಾದವರಿಗೆ 62,೦೦೦ ಸಾವಿರ ಮೊತ್ತದ 62 ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಡಗನ್ನೂರಿನ ಅನನ್ಯರವರಿಗೆ ಒಂದು ತಿಂಗಳಿಗೆ ಬೇಕಾಗಿರುವ ರೂ.2750 ರೂಪಾಯಿಯ ಔಷಧಿಯನ್ನು ನೀಡಲಾಯಿತು. ಹಾಗೂ 47 ಜನರಿಗೆ ಬಿಪಿ, ಶುಗರ್ ತಪಾಸಣೆ ಮಾಡಲಾಯಿತು

ಟ್ರಸ್ಟಿನ ಅಧ್ಯಕ್ಷೆ ಶೋಭಾ ಮಡಿವಾಳ, ಸ್ಥಾಪಕ ಅಧ್ಯಕ್ಷರಾದ ಜೇಸಿ ಚೇತನ್ ಕುಮಾರ್, ಸದಸ್ಯರಾದ ವಿಜಯ್ ಕುಮಾರ್, ಸೌಜನ್ಯ ಅರ್ಲಪದವು, ಮಾಲಿನಿ, ಕಾವ್ಯ, ಸರಸ್ವತಿ, ಪುಷ್ಪ, ಸ್ವಾತಿ ಎ., ದಿವ್ಯ, ಅಕ್ಷಯ ಕುಲಾಲ್ ಹಾಜರಿದ್ದರು. ಸ್ವಾತಿ ಪ್ರಾರ್ಥಿಸಿದರು. ಮಮತಾ ಸ್ವಾಗತಿಸಿದರು. ಹರ್ಷಿತಾ ವಂದಿಸಿದರು. ಶೃತಿಕ ಜಲ್ಸುರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here