ಬಿ.ಎಡ್.: ವಿವೇಕಾನಂದದ ಸೌಮ್ಯ ಕೆ.ವಿ.ರವರಿಗೆ ಪ್ರಥಮ, ವೃದ್ಧಿಯವರಿಗೆ 8ನೇ ರ‍್ಯಾಂಕ್

0

ಪುತ್ತೂರು : ಮಂಗಳೂರು ವಿಶ್ವವಿದ್ಯಾನಿಲಯದ 2020-2022ನೇ ಸಾಲಿನ ಬಿ.ಎಡ್ ಪರೀಕ್ಷಾ ಫಲಿತಾಂಶ ಘೋಷಣೆಯಾಗಿದ್ದು, ವಿವೇಕಾನಂದ ಬಿ.ಎಡ್ ಕಾಲೇಜಿನ ವಿದ್ಯಾರ್ಥಿ ಶಿಕ್ಷಕಿಯಾದ ಕುಮಾರಿ.ಸೌಮ್ಯ ಕೆ.ವಿ ಅವರು ಪ್ರಥಮ ರ‍್ಯಾಂಕ್ ಹಾಗೂ ಶ್ರೀಮತಿ ವೃದ್ಧಿಯವರು 8ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೌಮ್ಯ ಕೆ.ವಿ. ಅವರು 88.58% ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್‌ನ್ನು ಪಡೆದಿರುತ್ತಾರೆ. ಇವರು ವಿಠಲ ಚೌಟ ಮತ್ತು ಶ್ರೀಮತಿ ಸರೋಜಾ ಸಕಲೇಶಪುರ ಇವರ ಪುತ್ರಿಯಾಗಿರುತ್ತಾರೆ, ಶ್ರೀಮತಿ ವೃದ್ದಿ ಎಂ. 86.88% ಅಂಕಗಳೊಂದಿಗೆ ಎಂಟನೇ ರ‍್ಯಾಂಕ್ ಪಡೆದಿರುತ್ತಾರೆ. ಇವರು ಪ್ರವೀಣ್ ಆಚಾರ್ಯ ಉಡುಪಿ ಇವರ ಪತ್ನಿಯಾಗಿರುತ್ತಾರೆ.

LEAVE A REPLY

Please enter your comment!
Please enter your name here