ಪಾಣಾಜೆ: ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಸಭೆ – ಲಕ್ಷ್ಮಣ ನಾಯ್ಕ್‌ರವರಿಗೆ ಶ್ರದ್ಧಾಂಜಲಿ

0

ಪಾಣಾಜೆ: ಬಿಜೆಪಿ ವಿಜಯ ಸಂಕಲ್ಪ‌ ಯಾತ್ರೆಯ ಅಭಿಯಾನದ ಪೂರ್ವಭಾವಿ ಪಾಣಾಜೆ ಬಿಜೆಪಿ ಗ್ರಾಮಸಮಿತಿ ಸಭೆಯು ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ಮಾ. 7 ರಂದು ನಡೆಯಿತು. 

ಲಕ್ಷ್ಮಣ ನಾಯ್ಕ್‌ರವರಿಗೆ ಶ್ರದ್ದಾಂಜಲಿ

ಇದೇ ವೇಳೆ ಇತ್ತೀಚೆಗೆ ಅಪಘಾತದಲ್ಲಿ ಮೃತರಾದ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ ನಾಯ್ಕ್ ಬಿ. ರವರಿಗೆ ನುಡಿನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಶಾಸಕ ಸಂಜೀವ‌ ಮಠಂದೂರು ಸಭೆಯನ್ನು ಉದ್ದೇಶಿಸಿ ಹಾಗೂ ನುಡಿನಮನ ಸಲ್ಲಿಸಿ ಮಾತನಾಡಿದರು.

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ‌ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ತಾ.ಪಂ. ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ್, ಜಯರಾಮ ಪೂಜಾರಿ,  ಪಾಣಾಜೆ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಸದಾಶಿವ ರೈ ಸೂರಂಬೈಲು, ಪಾಣಾಜೆ ಪ್ರಾ.ಕೃ.ಪ.ಸಹಕಾರ ಸಂಘದ ನಿರ್ದೇಶಕ ರವೀಂದ್ರ ಭಂಡಾರಿ, ಪಾಣಾಜೆ ಗ್ರಾ.ಪಂ. ಅಧ್ಯಕ್ಷೆ ಭಾರತೀ ಭಟ್, ಸದಸ್ಯರಾದ ಸುಭಾಸ್ ರೈ, ಮೋಹನ ನಾಯ್ಕ್, ಸುಲೋಚನಾ, ಜಯಶ್ರೀ ಉಪಸ್ಥಿತರಿದ್ದರು. ಬಿಜೆಪಿ ಗ್ರಾಮ ಸಮಿತಿ ಪದಾಧಿಕಾರಿಗಳು, ಸದಸ್ಯರು ಕಾರ್ಯಕರ್ತರು ಪಾಲ್ಗೊಂಡರು.

LEAVE A REPLY

Please enter your comment!
Please enter your name here