ಯಂಗ್ ಬ್ರಿಗೇಡ್ ಗಡಿಯಾರ ತಂಡದ ಜರ್ಸಿ ಬಿಡುಗಡೆ

0

ಪುತ್ತೂರು: ಯಂಗ್ ಬ್ರಿಗೇಡ್ ಸೇವಾದಳದ ವತಿಯಿಂದ ನಡೆಯಲಿರುವ ರಾಜೀವ ಗಾಂಧಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ’ಯಂಗ್ ಬ್ರಿಗೇಡ್ ಗಡಿಯಾರ’ ತಂಡದ ಆಟಗಾರರ ಜರ್ಸಿ ಬಿಡುಗಡೆ ಪುತ್ತೂರಿನ ಬ್ರಾಂಡ್ ಬಾಯ್ ಶೋರೂಮ್‌ನಲ್ಲಿ ನಡೆಯಿತು.

ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಜೆರ್ಸಿ ಅನಾವರಣಗೊಳಿಸಿದರು. ಬಳಿಕ ಪುತ್ತೂರು ಸರ್ಕಾರಿ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಯಲ್ಲಿ ನೂತನವಾಗಿ ಆರಂಭವಾಗಿರುವ ಅಶೋಕ್ ರಾವ್‌ರವರ ಆದ್ಯಾ ಗಿಫ್ಟ್ ಗ್ಯಾಲರಿ’ ಮಳಿಗೆಗೆ ಶಕುಂತಳಾ ಶೆಟ್ಟಿ ಭೇಟಿ ನೀಡಿ ಶುಭ ಹಾರೈಸಿದರು.

ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ಸಾಹಿರಾ ಝುಬೇರ್, ಯುವ ಮುಖಂಡ ಪ್ರಹ್ಲಾದ್ ಬೆಳ್ಳಿಪ್ಪಾಡಿ, ಜೋಸ್ ಅಲುಕ್ಕಾಸ್‌ನ ರಾಜೇಶ್, ಅಶೋಕ್ ರಾವ್ ಬಪ್ಪಳಿಗೆ ಹಾಗೂ ಬ್ರಾಂಡ್ ಬಾಯ್ಸ್ ಮಾಲೀಕರಾದ ರಿಯಾಝ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here