ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ||ಉಮಾನಾಥ ಶೆಣೈರವರಿಗೆ ಘಟಿಕೋತ್ಸವದಲ್ಲಿ ಸನ್ಮಾನ

0

ಪುತ್ತೂರು: ಶ್ರವಣಬೆಳಗೊಳದ ಶ್ರೀಧವಲತೀರ್ಥಂನಲ್ಲಿರುವ ಬಾಹುಬಲಿ ಪ್ರಾಕೃತ ವಿದ್ಯಾಪೀಠದ ಆವರಣದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ನಿವೃತ್ತ ಇತಿಹಾಸ ಪ್ರಾಧ್ಯಾಪಕ, ಹಿರಿಯ ಸಂಶೋಧಕ ಹಾಗೂ ಪ್ರಾಕೃತ ಸಾಹಿತ್ಯ ಪ್ರಶಸ್ತಿ ವಿಜೇತ ಡಾ||ಉಮಾನಾಥ ಶೆಣೈರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಉದಯಪುರದ ಮೋಹನ್‌ಲಾಲ್ ಸುಖಾಡಿಯಾ ವಿಶ್ವವಿದ್ಯಾನಿಲಯದ ಡಾ||ಜಿನೇಂದ್ರ ಕುಮಾರ್ ಜೈನ್, ನಿರ್ದೇಶಕ ಡಾ||ಜಯಕುಮಾರ್ ಉಪಾಧ್ಯೆ, ಜಿಲ್ಲಾ ನಿವೃತ್ತ ನ್ಯಾಯಾಧೀಶ ಎ.ಸಿ.ವಿದ್ಯಾಧರ್, ಮ್ಯಾನೇಜಿಂಗ್ ಟ್ರಸ್ಟಿ ಡಿ.ವಿದ್ಯಾನಂದ ಮತ್ತು ಮುಖ್ಯಕಾರ್ಯವಿರ್ವಹಣಾಧಿಕಾರಿ ಡಾ||ಮುರಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ||ಉಮಾನಾಥ ಶೆಣೈರವರು ನೆಹರೂನಗರ ವಿವೇಕನಂದ ಪದವಿ ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕರಾಗಿದ್ದು ಮುರ ರಾಮನಗರ ನಿವಾಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here