“ಮಧುಪ್ರಪಂಚ” ಸಂಚಿಕೆಯ ಸಲಹಾಮಂಡಳಿ ಸಭೆ

0

ಪುತ್ತೂರು: ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘ ‘ಮಾಧುರಿ ಸೌಧ’ ಪುತ್ತೂರು ಇದರ ವತಿಯಿಂದ ಪ್ರಕಟವಾಗುವ ಜೇನು ಕೃಷಿಕರ ಏಕೈಕ ‘ಮಧುಪ್ರೇಮಿಗಳ ಮಾಧ್ಯಮ “ಮಧುಪ್ರಪಂಚ” ಸಂಚಿಕೆಯ ಸಲಹಾಮಂಡಳಿಯ ಸಭೆ ಸಂಘದ ಅಧ್ಯಕ್ಷ ಹಾಗೂ ಗೌರವ ಸಂಪಾದಕ ಚಂದ್ರ ಕೋಲ್ಚಾರ್‌ರವರ ಅಧ್ಯಕ್ಷತೆಯಲ್ಲಿ ಸಂಘದ ಕಛೇರಿಯಲ್ಲಿ ನಡೆಯಿತು.

ಸಂಘದ ವ್ಯವಸ್ಥಾಪನಾ ನಿರ್ದೇಶಕ ತಿಮ್ಮಯ್ಯ ಪಿಂಡಿಮನೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಉಪಾಧ್ಯಕ್ಷ, ಸಲಹಾಮಂಡಳಿಯ ಮುಖ್ಯಸ್ಥರೂ ಆಗಿರುವ ಪಿ.ರಾಜಾರಾಮ ಶೆಟ್ಟಿ ಕೋಲ್ಪೆ ಸಲಹೆ ಸೂಚನೆ ನೀಡಿದರು. ಪ್ರಧಾನ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಮುಂಬರುವ ಯುಗಾದಿ ಸಂಚಿಕೆಯ ಕುರಿತು ತಿಳಿಸಿದರು. ಸಭೆಯಲ್ಲಿ ಚಂದಾದಾರರ ಸಂಖ್ಯೆ ಹೆಚ್ಚಿಸುವ ಕುರಿತು, ಜಾಹೀರಾತುದಾರರ ಸಹಕಾರ ಕೋರುವ ಕುರಿತು, ಚರ್ಚಿಸಲಾಯಿತು. ಪತ್ರಿಕೆಯ ಸಂಪಾದಕ, ಪತ್ರಕರ್ತ ಜಯಾನಂದ ಪೆರಾಜೆ ಸಲಹೆ ಸೂಚನೆ ನೀಡಿ ಎಲ್ಲರಿಗೂ ವಂದಿಸಿದರು. ಕಛೇರಿ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here