ಪುತ್ತೂರು ಶ್ರೀನಿಧಿ ಸೇವಾ ಟ್ರಸ್ಟ್‌ನಿಂದ ಆಹಾರ ಸಾಮಗ್ರಿ, ಧನಸಹಾಯ ವಿತರಣೆ

0

ಪುತ್ತೂರು: ಪುತ್ತೂರು ಶ್ರೀನಿಧಿ ಸೇವಾ ಟ್ರಸ್ಟ್ ವತಿಯಿಂದ ಹೃದಯರೋಗ, ಕ್ಯಾನ್ಸರ್, ಕಿಡ್ನಿ ವೈಫಲ್ಯ ಬಾಧಿತ ನೊಂದವರ ಪಾಲಿಗೆ ಆಹಾರ ಸಾಮಗ್ರಿ ಮತ್ತು ಧನಸಹಾಯ ವಿತರಣಾ ಕಾರ್ಯಕ್ರಮ ಮಾ.12ರಂದು ಶ್ರೀಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆಯಿತು.

ದ.ಕ.ಜಿಲ್ಲಾ ಬಾಲನ್ಯಾಯ ಮಂಡಳಿಯ ನ್ಯಾಯಾಧೀಶೆ ಕಸ್ತೂರಿ ಬೊಳ್ವಾರ್ ಮತ್ತು ಬಿಎಸ್‌ಎನ್‌ಎಲ್‌ನ ನಿವೃತ್ತ ನೌಕರ ಮಂಜುನಾಥರವರು ಕಾರ್ಯಕ್ರಮ ಉದ್ಘಾಟಿಸಿದರು. ಕಸ್ತೂರಿ ಬೊಳ್ವಾರ್ ಮಾತನಾಡಿ ಜನರ ಸೇವೆಯನ್ನು ದೇವರು ಶ್ರೀನಿಧಿ ಟ್ರಸ್ಟ್ ಮೂಲಕ ನಿಸ್ವಾರ್ಥಿ ಸೇವೆ ಮಾಡಿಸುತ್ತಿದ್ದಾರೆ. ಬಡ ರೋಗಿಗಳ ಸೇವೆ ದೇವರ ಕೆಲಸ. ಉತ್ತಮವಾಗಿ ಸಮಾಜದಲ್ಲಿ ಶ್ರಮಿಸುತ್ತೆ ಎಂದರು.

ಮಂಜುನಾಥರವರು ಮಾತನಾಡಿ ಇನ್ನಷ್ಟು ಜನರ ಸಹಕಾರ ಈ ಸೇವೆಗೆ ನೀಡುವಂತೆ ಅಭಿನಂದಿಸಿದರು. ಗಣೇಶ್ ಮಾಡ್ನೂರು ಪ್ರಾರ್ಥಿಸಿದರು. ರಶ್ಮಿ ವೀರಮಂಗಲ ಸ್ವಾಗತಿಸಿ, ಯಶ್ವಿತಾ ವಂದಿಸಿದರು. ಕೃಷ್ಣಪ್ಪ ಬಂಬಿಲ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿಧಿ ಸೇವಾ ಟ್ರಸ್ಟ್‌ನ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here