ಕೊಣಾಲು: ಕಡೆಂಬಿಲತ್ತಾಯ ಗುಡ್ಡೆಯಲ್ಲಿ ದೈವಗಳ ನೇಮೋತ್ಸವ

0

ನೆಲ್ಯಾಡಿ: ಕಡಬ ತಾಲೂಕಿನ ಕೊಣಾಲು ಗ್ರಾಮದ ಕಡೆಂಬಿಲತ್ತಾಯ ಗುಡ್ಡೆಯಲ್ಲಿರುವ ಚಕ್ರವರ್ತಿ ಕೊಡಮಣಿತ್ತಾಯಿ ಮತ್ತು ಪರಿವಾರ ದೈವಗಳ ನೇಮೋತ್ಸವ ಮಾ.೨೦ ಹಾಗೂ ಮಾ.೨೧ರಂದು ನಡೆಯಿತು.

ಮಾ.೨೦ರಂದು ಬೆಳಿಗ್ಗೆ ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ನಡೆಯಿತು. ಸಂಜೆ ತೋರಣ ಮುಹೂರ್ತ, ಗ್ರಾಮಸ್ಥರಿಂದ ದೈವಗಳಿಗೆ ಪ್ರಾರ್ಥನೆ ನಡೆಯಿತು. ಬಳಿಕ ಎಣ್ಣೆತ್ತೋಡಿಯಿಂದ ಶಿರಾಡಿ ದೈವದ ಭಂಡಾರ ತರಲಾಯಿತು. ಕಾಯರ್ತಡ್ಕದಿಂದ ಕಲ್ಕುಡ, ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ಭಂಡಾರ ತರಲಾಯಿತು. ಬಳಿಕ ರಾತ್ರಿ ನೇಮೋತ್ಸವ ನಡೆಯಿತು. ಚಕ್ರವರ್ತಿ ಕೊಡಮಣಿತ್ತಾಯಿ, ದೈವಂಕ್ಲು, ಮೈಸಂತಾಯ, ಕಡೆಂಬಿಲತ್ತಾಯ, ಪಂಜುರ್ಲಿ, ಶಿರಾಡಿ ದೈವ, ಕಲ್ಕುಡ, ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಿತು. ಮಾ.೨೧ರಂದು ಸಂಜೆ ವೇಳೆ ದೈವಗಳ ನೇಮೋತ್ಸವ ಸಂಪನ್ನಗೊಂಡಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ಹರಕೆ ಸಮರ್ಪಿಸಿ ದೈವಗಳ ಗಂಧಪ್ರಸಾದ ಸ್ವೀಕರಿಸಿದರು.

ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಸತೀಶ್ ರೈ ಕೊಣಾಲುಗುತ್ತು, ಶ್ರೀಮತಿ ಚಿತ್ರಾವತಿ ರೈ ಕೊಣಾಲುಗುತ್ತು, ಪ್ರತೀಕ್ಷಾ ರೈ ಕೊಣಾಲುಗುತ್ತು, ನಿವೃತ್ತ ಪ್ರಾಂಶುಪಾಲ ವಿಠಲ ರೈ ಕೊಣಾಲುಗುತ್ತು, ದೈವಸ್ಥಾನದ ಆಡಳಿತ ಸಮಿತಿ ಉಪಾಧ್ಯಕ್ಷ ಜಗದೀಶ್ ಶೆಟ್ಟಿ ಕಡೆಂಬಲಿ, ಕಾರ್ಯದರ್ಶಿ ಚಂದಪ್ಪ ಗೌಡ ಕಾಯರ್ತಡ್ಕ, ಜೊತೆ ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಕಲಾಯಿ, ಕೋಶಾಧಿಕಾರಿ ಧರ್ಣಪ್ಪ ಗೌಡ ಕೋಲ್ಪೆ, ಸದಸ್ಯರಾದ ಪ್ರಕಾಶ್ ಸುವರ್ಣ ಕುರುಂಬೊಟ್ಟು, ವಿಶ್ವನಾಥ ಪೂಜಾರಿ ಪಾಂಡಿಬೆಟ್ಟು, ಗ್ರಾಮದ ಪ್ರಮುಖರಾದ ವೈ.ಮುತ್ತಪ್ಪ ಗೌಡ ಎಣ್ಣೆತ್ತೋಡಿ, ವೈ.ಡೊಂಬಯ್ಯ ಗೌಡ ಎಣ್ಣೆತ್ತೋಡಿ, ಧರ್ಣಪ್ಪ ದಾಸ್ ಸುಪ್ರಿತನಿಲಯ, ಬಾಬು ಗೌಡ ಕಾಯರ್ತಡ್ಕ, ಎಂ.ಪಿ.ಜತ್ತಪ್ಪ ಗೌಡ ಮಣ್ಣಮಜಲು, ನೋಣಯ್ಯ ಗೌಡ ಡೆಬ್ಬೇಲಿ, ದಿನೇಶ್ ಕೆ.ಕೋಲ್ಪೆ, ರಮೇಶ್ ಗೌಡ ಕಾಯರ್ತಡ್ಕ, ಬಾಲಕೃಷ್ಣ ರೈ ತೋಟ, ತ್ಯಾಂಪಣ್ಣ ದೇವಾಡಿಗ ಗಾಣದಕೊಟ್ಟಿಗೆ, ರಘುರಾಮ ಶೆಟ್ಟಿ ಕಡೆಂಬಿಲ, ಸುಂದರ ಗೌಡ ಸುರಕ್ಷಾ ನಿಲಯ ಆರ್ಲ, ಲಿಂಗಪ್ಪ ಗೌಡ ದರ್ಖಾಸು, ಭಾಸ್ಕರ ರೈ ತೋಟ, ನೋಣಯ್ಯ ಶೆಟ್ಟಿ ಮರಂದೆ, ಲೋಕೇಶ್ ದೇವಾಡಿಗ, ಕೆ.ಗಣೇಶ್ ಟೈಲರ್ ಪಾಂಡಿಬೆಟ್ಟು, ಪದ್ಮನಾಭ ಶೆಟ್ಟಿ ಮರಂದೆ, ನಾಗೇಶ್ ಗೌಡ ಮರಂದೆ, ಹರೀಶ್ ಮೂಲ್ಯ ಕಡೆಂಬಿಲ, ಮಂಜುನಾಥ ಗೌಡ ದರ್ಖಾಸು, ಎಂ.ಎಸ್.ಜತ್ತಪ್ಪ ಗೌಡ ಮಣ್ಣಮಜಲು, ಅಣ್ಣಿ ಗೌಡ ಮಣ್ಣಮಜಲು, ಲೋಕೇಶ್ ಪೂಜಾರಿ ಆಲಂತಾಯ, ಆನಂದ ಪೂಜಾರಿ ಅಂಬರ್ಜೆ, ಸಾಂತಪ್ಪ ಗೌಡ ಎಣ್ಣೆತ್ತೋಡಿ, ತಾರನಾಥ ಗೌಡ ಎಣ್ಣೆತ್ತೋಡಿ, ಸದಾನಂದ ಗೌಡ ಮಣ್ಣಮಜಲು, ಮೋನಪ್ಪ ಗೌಡ ಎಣ್ಣೆತ್ತೋಡಿ, ದಿನೇಶ್ ಬಂಗೇರ ಕಲಾಯಿ, ಅಭಿಲಾಶ್ ಪಾಂಡಿಬೆಟ್ಟು, ರಾಜೇಶ್ ಕಲಾಯಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here