ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲ- ಅಧ್ಯಕ್ಷ ನಾಗೇಶ್ ಇ, ಕಾರ್ಯದರ್ಶಿ ದಯಾನಂದ, ಸಂಚಾಲಕ ಚಂದ್ರೇಖರ್ ಪಾಟಾಳಿ, ಗೌರವಾಧ್ಯಕ್ಷ ಚಿದಾನಂದ ರೈ

0

ಪುತ್ತೂರು: ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ನಾಗೇಶ್ ಇ, ಕಾರ್ಯದರ್ಶಿಯಾಗಿ ದಯಾನಂದ ಕೆಮ್ಮಾಯಿ, ಸಂಚಾಲಕರಾಗಿ ಚಂದ್ರಶೇಖರ್ ಪಾಟಾಳಿ, ಗೌರವಾಧ್ಯಕ್ಷರಾಗಿ ಚಿದಾನಂದ ರೈ ಕೊಪ್ಪಳ ಅವರು ಆಯ್ಕೆಯಾಗಿದ್ದಾರೆ.


ಕೆಮ್ಮಾಯಿ ಯುವಕ ಮಂಡಲದ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಪ್ರವೀಣ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ 2023-24ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಉಪಾಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಬಡಾವು, ಜೋತೆ ಕಾರ್ಯದರ್ಶಿಯಾಗಿ ಕೃಷ್ಣಪ್ಪ ಗೌಡ, ಕೋಶಾಧಿಕಾರಿ ಚಂದ್ರಶೇಖರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉಮೇಶ್ ಗೌಡ, ಕ್ರೀಡಾ ಕಾರ್ಯದರ್ಶಿಯಾಗಿ ಯಶವಂತ ಹೋಸಹೊಕ್ಲು, ಸಂಘಟನಾ ಕಾರ್ಯದರ್ಶಿಯಾಗಿ ಅಶೋಕ್ ಗೌಡ ನಗರಸಭೆ, ಲೆಕ್ಕ ಪರಿಶೋಧಕರಾಗಿ ಮಂಜುನಾಥ ಕೆಮ್ಮಾಯಿಯವರನ್ನು ಸದಸ್ಯರ ಸಹ ಅನುಮತಿ ಯೊಂದಿಗೆ ಆಯ್ಕೆ ಮಾಡಲಾಯಿತು. ಸಲಹ ಸಮಿತಿ ಸದಸ್ಯರಾಗಿ ಹೇಮಚಂದ್ರ ಕೆಮ್ಮಾಯಿ, ಸುಧಾಕರ ನ್ಯಾಕ್, ಅಣ್ಣಿ ಪೂಜಾರಿ ಬೀರನಹಿತ್ಲು, ಪ್ರವೀಣ್ ನ್ಯಾಕ್, ಸುಂದರ ಪೂಜಾರಿ ಬಡಾವು, ಪ್ರಕಾಶ್ ಬೋವಿನಕಾಡು, ನಾರಾಯಣ್ ಭಟ್, ರಾಧಾಕೃಷ್ಣ ಶೆಟ್ಟಿರವರನ್ನು ನೇಮಕ ಮಾಡಲಾಯಿತು. ಅಣ್ಣಿ ಪೂಜಾರಿ ಬೀರ್‍ನಹಿತ್ಲು ಅವರು ವಂದಿಸಿದರು. ಪ್ರಶಾಂತ್ ಕೆಮ್ಮಾಯಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here