ಸವಣೂರು ಉಮರ್ ಉಸ್ತಾದರ ಅನುಸ್ಮರಣೆ

0

ಉಪ್ಪಿನಂಗಡಿ: ಸಮಸ್ತ ಉಲಮಾ ಒಕ್ಕೂಟದ ಸಂದೇಶ ಪ್ರಚಾರ ರಂಗದಲ್ಲಿ ತನ್ನನ್ನು ತೊಡಗಿಸಿಕೊಂಡು ಹತ್ತಾರು ಮಸೀದಿಗಳಲ್ಲಿ ಅಮೋಘ ಸೇವೆಗೈದು ಸಾವಿರಾರು ವಿದ್ಯಾರ್ಥಿಗಳ ಪ್ರಿಯ ಗುರುವರ್ಯರಾಗಿ ಸಾತ್ವಿಕ ಜೀವನ ನಡೆಸಿ ನಮ್ಮನ್ನಗಲಿದ ಸವಣೂರು ಉಮರ್ ಉಸ್ತಾದರ ಅನುಸ್ಮರಣೆ ಧಿಕ್ರ್ ತಹ್ಲೀಲ್ ಸಮರ್ಪಣಾ ಕಾರ್ಯಕ್ರಮ ಆತೂರು ಕುಂಡಾಜೆ ರಹ್ಮಾನಿಯಾ ಮಸೀದಿಯಲ್ಲಿ ಜರಗಿತು.


ಎಸ್ ಬಿ ದಾರಿಮಿಯವರ ನೇತೃತ್ವದಲ್ಲಿ ಉಮರ್ ಉಸ್ತಾದರ ಕಬರ್ ಝಿಯಾರತ್‌ನೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಖಾಸಿಂ ದಾರಿಮಿ ಕಿನ್ಯ ,ಚಾಪಲ್ಲ ಬಾಖವಿ ಉಸ್ತಾದ್, ಹನೀಫ್ ದಾರಿಮಿ ಸುರಿಬೈಲು ಮತ್ತಿತರರು ಅನುಸ್ಮರಣಾ ಭಾಷಣ ಮಾಡಿದರು


ಶಫೀಕ್ ಅಝಹರಿ, ನಾಸಿರ್ ಫೈಝಿ, ಹಮೀದ್ ಹನೀಫಿ, ಸೈಪುದ್ದೀನ್ ಯಮಾನಿ, ಅಬ್ದುಲ್ಲಾ ಹಾಜಿ ಕುಂಡಾಜೆ, ಜಮಾಅತ್ ಅಧ್ಯಕ್ಷರು ಹಮೀದ್ ಕುಂಡಾಜೆ ಹಾಗೂ ಜಮಾಅತ್ ಕಮಿಟಿ ಸದಸ್ಯರು ಜಮಾಅತರು ಮುತಹಲ್ಲಿಂ ಹಾಗೂ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here