ಕೈರೊಥೆರಪಿ , ಮರ್ಮಥೆರಪಿ ಮೂಲಕ ಪ್ರತಿ ನೋವಿಗೂ ಪರಿಹಾರ…; ನೂತನವಾಗಿ ಆರಂಭಗೊಂಡ ಆಯುರ್ವೇದ ಹೆಲ್ತ್ ಸೆಂಟರ್ “ಹರ್ಷ” ದಲ್ಲಿ ಚಿಕಿತ್ಸೆ

0

  • ಯಾವುದೇ ರೀತಿಯ ನೋವುಗಳಿಗೂ ಕ್ಷಣರ್ಧಾದಲ್ಲೇ ಪರಿಹಾರ.
  • ಫೂಟ್ ಪಲ್ಸ್ ಥೆರಪಿ ಮೂಲಕ ರಕ್ತ ಪರಿಚಲನೆ , ನರಗಳ ದೀರ್ಘಕಾಲಿನ ಸಮಸ್ಯೆ ಗಳಿಗೆ ಪರಿಹಾರ.
  • ನುರಿತ ವೈದ್ಯರಿಂದ ಚಿಕಿತ್ಸೆ ಸೌಲಭ್ಯವಿದ್ದು , ನೋಂದಾವಣೆಗಾಗಿ 9741379326 ಸಂಖ್ಯೆ ಸಂಪರ್ಕಿಸಬಹುದು.

ಪುತ್ತೂರು : ಕುತ್ತಿಗೆ , ಬೆನ್ನುನೋವು , ಸಯಾಟಿಕ್ , ಸ್ಲಿಪ್ ಡಿಸ್ಕ್ ನೋವು, ಕಾಲು ನೋವು, ಮೈ-ಕೈ ನೋವು ಕೀಲು ಮತ್ತು ಎಲುಬು ಸಂಬಂಧಿತ ಸಮಸ್ಯೆ ಗಳಿಗೆ ಯಾವುದೇ ರೀತಿಯ ಶಸ್ತ್ರಚಿಕಿತ್ಸೆ ಇಲ್ಲದೇ ಕೇವಲ ಮಸಾಜ್ ಥೆರಪಿ ಮೂಲಕ ಅಂದರೆ ಕೈರೋಥೆರಪಿ (ಬೋನ್ ಸೆಟ್ಟರ್) ಹಾಗೂ ಮರ್ಮಥೆರಪಿ ಮೂಲಕ ಬರೀ ನಿಮಿಷಗಳಲ್ಲಿ ಎಲ್ಲಾ ಬಗೆಯ ನೋವನ್ನೂ ನಿವಾರಣೆ ಮಾಡಬಲ್ಲ ಹಾಗೂ ಫೂಟ್ ಪಲ್ಸ್ ಥೆರಪಿ ಚಕಿತ್ಸಾ ಕೇಂದ್ರ ಹರ್ಷ ಆಯುರ್ವೇದಿಕ್ ಹೆಲ್ತ್ ಸೆಂಟರ್ ಇಲ್ಲಿನ ದರ್ಬೆ ಬೈಪಾಸ್ ಬಳಿಯ ಅನಾಜೆ ಅಮ್ಮು ರೈ ಸಂಕೀರ್ಣದಲ್ಲಿ ಮಾ.23 ರಂದು ಶುಭಾರಂಭಗೊಂಡಿತು.

ಮಹಾವೀರ ಆಸ್ಪತ್ರೆ ಇದರ ಖ್ಯಾತ ಹೃದ್ರೋಗ ತಜ್ಞ ಡಾ. ಸುರೇಶ್ ಪುತ್ತೂರಾಯ ಸಂಸ್ಥೆಯ ದೀಪ ಪ್ರಜ್ವಲನೆ ಮೂಲಕ ಉದ್ಘಾಟನೆ ನೆರವೇರಿಸಿ, ನೋವಿನಿಂದ ಬಳಲಿ ಬರುವಂತಹವರಿಗೆ ಅತ್ಯುತ್ತಮ ರೀತಿಯ ಥೆರಪಿ, ಚಿಕಿತ್ಸೆ ಒದಗಿಸೋ ಮೂಲಕ ಸಂಸ್ಥೆ ಬೆಳೆಯಲಿಯೆಂದು ಹಾರೈಸಿದರು.

ಡಾ. ಶೈಲೇಶ್ ಡಿ. ಎಸ್. ಪಡೀಲ್, ಸಂಕೀರ್ಣ ಮಾಲೀಕ ಬಾಲಕೃಷ್ಣ ರೈ, ರಝಾಕ್ ಕಾರ್ ಲಿಂಕ್ಸ್ , ಸ್ಟಾರ್ ಸೆಲೂನ್ ಮಾಲೀಕ ಪ್ರವೀಣ್ ಮತ್ತು ಮೆಹಬೂಬ್ ಸುಲ್ತಾನ್ ನಗರ ಹಾಗೂ ರಮೇಶ್ ಮುರ ಮೊದಲಾದ ಅತಿಥಿಗಳು ಆಗಮಿಸಿ ಹರಸಿದರು.

ಬಿ.ಪಿ, ಸಕ್ಕರೆ ಕಾಯಿಲೆ, ಎಕ್ಸಿಮೋ ಮತ್ತು ಸೋರಿಯಸಿಸ್ಸ್ ,ಕಿಡ್ನಿ ಸ್ಟೋನ್, ಲಿವರ್ ಸ್ಟೋನ್, ಕಾಮಾಲೆ, ಕೂದಲು ಉದುರುವಿಕೆ, ಹೊಟ್ಟು, ವೆರಿಕೋಸ್, ಕೊಲೆಸ್ಟ್ರಾಲ್, ಯೂರಿನ್ ಹಾಗೂ ಯೂರಿಕ್ ಆಸಿಡ್ ಪ್ರಾಬ್ಲೆಂ, ಥೈರಾಯಿಡ್ ಮತ್ತು ಪಂಚಕರ್ಮ ಚಿಕಿತ್ಸೆಗಳಿಗೆ ನುರಿತ ವೈದ್ಯರಾದ ಡಾ.ಶೈಲೇಶ್ ಇವರು ಪ್ರತಿದಿನ ಬೆಳಗ್ಗೆಯಿಂದ, ಸಂಜೆಯವರೆಗೆ ಕ್ಲಿನಿಕ್ನಲ್ಲಿ ಲಭ್ಯವಿದ್ದು , ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಸಿ.ಬಿ.ಸಾಲಿಯಾನ್ ತಿಳಿಸಿ, ವಂದಿಸಿದರು. ತೇಜಸ್ವಿನಿ ಸಾಲಿಯಾನ್ ಸಹಕಾರ ನೀಡಿದರು.

LEAVE A REPLY

Please enter your comment!
Please enter your name here