ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಬಂಗಾರ ಕಾಯರ್ ಕಟ್ಟೆಯ ಪುನರ್ ನವೀಕರಣಕ್ಕೆ ಚಾಲನೆ

0

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿ ಬಂಗಾರ್ ಕಾಯರ್ ಕಟ್ಟೆಯ ನವೀಕರಣ ಕಾರ್ಯಕ್ಕೆ ಮಾ.25 ರಂದು ಚಾಲನೆ ನೀಡಲಾಯಿತು.

ದೇವಳದ ಪ್ರಧಾನ ಅರ್ಚಕರಾಗಿರುವ ಸಮಿತಿ ಸದಸ್ಯ ವೇ ಮೂ ವಿ.ಎಸ್ ಭಟ್ ಅವರು ಪೂಜಾ ವಿಧಿವಿಧಾನ ಮಾಡಿ ಪ್ರಾರ್ಥನೆ ಸಲ್ಲಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ್ ಗೌಡ ಪ್ರಥಮ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಇಂಜಿನಿಯರ್ ಹಾಗೂ ಗುತ್ತಿಗೆದಾರ ಶಂಕರ ಭಟ್ಟ್, ಚಾಕರಿಯವರ ಕುಟುಂಬ, ನೆರೆಕರೆಯ ಭಕ್ತರು, ದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here