ನಾಲ್ಕಂಭ ಶ್ರೀ ಉಳ್ಳಾಲ್ತಿ ಕ್ರೀಡಾಂಗಣದ ತಡೆಗೋಡೆ ಉದ್ಘಾಟನೆ

0

ಕಾಣಿಯೂರು: ಕಾಣಿಯೂರು ಗ್ರಾಮ ಪಂಚಾಯತ್‌ನ ಅನುದಾನದಲ್ಲಿ ನಿರ್ಮಾಣಗೊಂಡಿರುವ ಚಾರ್ವಾಕ ಗ್ರಾಮದ ನಾಲ್ಕಂಭ ಶ್ರೀ ಉಳ್ಳಾಲ್ತಿ ಕ್ರೀಡಾಂಗಣದ ತಡೆಗೋಡೆಯನ್ನು ಹಿರಿಯರಾದ ದಾಮೋದರ ಗೌಡ ಅಂಬುಲರವರು ಮಾ.26ರಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ, ಸದಸ್ಯರಾದ ಕೀರ್ತಿಕುಮಾರಿ ಅಂಬುಲ, ಗಂಗಮ್ಮ ಗುಜ್ಜರ್ಮೆ, ತೇಜಕುಮಾರಿ ಉದ್ಲಡ್ಡ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಜಯಂತ್ ಅಂಬುಲ, ಗ್ರಾ.ಪಂ.ಮಾಜಿ ಸದಸ್ಯರಾದ ವೀರಪ್ಪ ಗೌಡ ಉದ್ಲಡ್ಡ, ದಯಾನಂದ ಅಂಬುಲ, ಪದ್ಮನಾಭ ಅಂಬುಲ,

ನಾಲ್ಕಂಭ ಶ್ರೀ ಷಣ್ಮುಖ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಸುಜಿತ್ ಅರುವ, ಕಾರ್ಯದರ್ಶಿ ಸಚಿನ್ ಕುಕ್ಕುನಡ್ಕ, ಉಪಾಧ್ಯಕ್ಷ ಪ್ರವೀಣ್ ಅಂಬುಲ,ಮಾಜಿ ಅಧ್ಯಕ್ಷ ದಿಶಾಂತ್ ನಡುಬೈಲು, ಪದಾಧಿಕಾರಿಗಳಾದ ಧರ್ಮಪಾಲ ಅಂಬುಲ, ಮಿಲನ್ ಅರುವ, ದಿಲೀಪ್ ಅಂಬುಲ, ಧನಂಜಯ ಉದ್ಲಡ್ಡ, ಪ್ರಕಾಶ್ ಕುಂಬ್ಲಾಡಿ, ವಿನೀತ್ ಅಂಬುಲ, ಪ್ರತೀಕ್ಷ್ ಉದ್ಲಡ್ಡ, ಗೌತಮ್ ಮಾಚಿಲ, ಯೋಗೀಶ್ ಉದ್ಲಡ್ಡ, ಅಶೋಕ್ ಮಾಚಿಲ ಮತ್ತೀತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here