ಬ್ರಹ್ಮ ಬೈದೆರುಗಳ ನೇತ್ರಾವತಿ ಗರಡಿ ಪೂಂಜಿರೋಟುವಿನಲ್ಲಿ “ಶ್ರೀ ದೇವಿ ಮಹಾತ್ಮೆ”

0

ಪುತ್ತೂರು : ಯೋಗಿಶ್ ರೈ ಮಣಿಕಾರ ಹಾಗೂ ಚೇತನ್ ಕುಮಾರ್ ರೈ ಐವತ್ತೊಕ್ಲು ಇವರ ಸೇವೆಯಾಟ, ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ, ಮಾ. 29 ರ ಸಂಜೆ ಇಲ್ಲಿನ ಶ್ರೀ ಬ್ರಹ್ಮ ಬೈದೆರುಗಳ ನೇತ್ರಾವತಿ ಗರಡಿ ಪೂಂಜಿರೋಟು, ಅಂಕತ್ತಡ್ಕ ಎಂಬಲ್ಲಿ ಶ್ರೀದೇವಿ ಮಹಾತ್ಮೆ ಪೌರಾಣಿಕ ಯಕ್ಷಗಾನ ಸೇವೆಯಾಟ ವಿಜೃಂಭಣೆಯಿಂದ ನಡೆಯಿತು.

ಸಂಜೆ ಚೌಕಿ ಪೂಜೆಯೊಂದಿಗೆ ಅಧಿಕೃತ ಚಾಲನೆ ನೀಡಲಾಯಿತು.

ಗಿರಿಜಾ ರೈ , ಮಕ್ಕಳು ಲಕ್ಷ್ಮಿ ನಿಲಯ ಐವತ್ತೊಕ್ಲು ಹಾಗೂ ದುಗ್ಗಮ್ಮ ರೈ, ಮಕ್ಕಳು ಅನುಗ್ರಹ ನಿಲಯ ಅಂಕತ್ತಡ್ಕ ಹಾಗೂ ಕುಟುಂಬಸ್ಥರು ಮತ್ತು ಯಕ್ಷಗಾನ ಪೇಮಿಗಳು ಹಾಜರಿದ್ದರು. ಬಳಿಕ ಗಂಧ ಪ್ರಸಾದ ವಿತರಣೆ ನಡೆದು, ನಂತರ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.

LEAVE A REPLY

Please enter your comment!
Please enter your name here