ಶ್ರೀಜಿತ್ ಸಲೂನ್ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಏಳನೇ ವರುಷದ ವಾರ್ಷಿಕೋತ್ಸವ ಸಂದರ್ಭ, ಇಲ್ಲಿನ ಎಪಿಎಂಸಿ ಮುಖ್ಯರಸ್ತೆ ಬಾಪ್ ಬೆನ್ಜ್ ಸಂಕೀರ್ಣದಲ್ಲಿ ಕಳೆದ ಆರು ವರುಷಗಳಿಂದ ಕಾರ್ಯಚರಿಸುತ್ತಿದ್ದ ರಾಜೇಶ್ ಭಂಡಾರಿ ಮಾಲೀಕತ್ವದ ಶ್ರೀಜಿತ್ ಸಲೂನ್ ಮಾ.30ರಂದು ಆದರ್ಶ ಆಸ್ಪತ್ರೆ ಬಳಿಯಿರುವ ಕಾರಂತ್ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.

ಪುರೋಹಿತ ಶ್ರೀಧರ ಭಟ್ ಕಬಕ ಪೂಜಾ ಕೈಂಕರ್ಯ ನೆರವೇರಿಸಿ, ಹರಸಿದರು. ಮಾಲೀಕರ ಮಾತೃಶ್ರೀ ಯಮುನಾ ಭಂಡಾರಿ ದೀಪ ಪ್ರಜ್ವಲನೆ ಮೂಲಕ ಸಂಸ್ಥೆಯ ಶ್ರೇಯೋಭಿವೃದ್ದಿಗೆ ಶುಭಕೋರಿದರು. ಶ್ರೀ ನಿಧಿ ಸಲೂನ್ ನ ಹರೀಶ್ ಭಂಡಾರಿ, ಸಹೋದರರಾದ ನಾರಾಯಣ ಭಂಡಾರಿ, ವಸಂತ ಭಂಡಾರಿ, ಚಂದ್ರಶೇಖರ ಭಂಡಾರಿ, ಸಹೋದರಿ ಜ್ಯೋತಿ, ಅನುಶ್ರೀ, ಸುಜಾತ ಸಹಿತ ಹಲವರು ಆಗಮಿಸಿ ಹಾರೈಸಿದರು.

ಮಾಲೀಕ ರಾಜೇಶ್ ಮಾತನಾಡಿ, ಕಳೆದ ಆರು ವರುಷಗಳಲ್ಲಿ ಗ್ರಾಹಕ ಜನತೆ ಒಳ್ಳೆಯ ಸಹಕಾರ, ಬೆಂಬಲ ನೀಡಿ ಹರಸಿದ್ದೀರಿ. ನಿಮ್ಮೆಲ್ಲರ ಪ್ರೀತಿಗೆ ನಾನೂ ಅಭಾರಿಯಾಗಿದ್ದೇನೆ, ಈ ಮೊದಲಿನಂತೆಯೇ ಸಹಕಾರ ನೀಡಿ ಎಂದು ಹೇಳಿ ವಂದಿಸಿದರು. ವಿನ್ಯಾಸ್ ಹಾಗೂ ಅರವಿಂದ ಸಹಕಾರ ನೀಡಿದರು.

LEAVE A REPLY

Please enter your comment!
Please enter your name here