ಚುನಾವಣೆ ಕಾನೂನು, ನೀತಿ ಸಂಹಿತೆ ಪಾಲಿಸಿ, ಭಯವಿದ್ದರೆ ನಮಗೆ ಮಾಹಿತಿ ನೀಡಿ ; ಬನ್ನೂರು ಸಾರ್ವಜನಿಕ ಸ್ಥಳದಲ್ಲಿ ಎಸ್.ಐ ಶ್ರೀಕಾಂತ್ ರಾಥೋಡ್ ರಿಂದ ಚುನಾವಣಾ ಕಾನೂನು ಮಾಹಿತಿ

0

ಪುತ್ತೂರು: ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಚುನಾವಣೆ ಕಾನೂನು, ನೀತಿ ಸಂಹಿತೆ ಪಾಲಿಸಿ, ಭಯವಿದ್ದರೆ ನಮಗೆ ಮಾಹಿತಿ‌ ನೀಡಿ ಎಂದು ಪುತ್ತೂರು ನಗರ ಪೊಲೀಸ್ ಠಾಣೆ ಎಸ್.ಐ ಶ್ರೀಕಾಂತ್ ರಾಥೋಡ್ ಅವರು ಹೇಳಿದರು.

ವಿಧಾನಸಭಾ ಚುನಾವಣೆಗೆ ಸಂಬಂಧಿಸಿ‌ ಸಾರ್ವಜನಿಕರಿಗೆ ನೀತಿ‌ ಸಂಹಿತೆ ಮಾಹಿತಿ ಮತ್ತು ಅಕ್ರಮ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ದ.ಕ ಜಿಲ್ಲಾ ಎಸ್ಪಿ ಅಮಟೆ ವಿಕ್ರಮ್ ಅವರ ನಿರ್ದೇಶನದಂತೆ ಜಿಲ್ಲೆಯ ವಿವಿಧ ಕಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚುನಾವಣೆ ಸೂಕ್ಷ್ಮ ಸ್ಥಳಗಳಲ್ಲಿ ನೀತಿ ಸಂಹಿತೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯುತ್ತಿದ್ದು ಮಾ.30 ರಂದು ಬನ್ನೂರು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.

ಪೊಲೀಸ್ ಸಿಬ್ಬಂದಿಗಳಾದ ಆನಂದ್, ಶ್ರೀಮಂತ್ ಮತ್ತು ವಿಶಾಲ್ ಸಹಿತ ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here