ಎ.4 ರಿಂದ ಪುತ್ತೂರು ಬ್ಲಾಕ್ ಕಾಂಗ್ರೆಸ್‌ನಿಂದ ಬೂತ್ ಕಾಂಗ್ರೆಸ್ ಭೇಟಿ; ಗ್ಯಾರೆಂಟಿ ಕಾರ್ಡ್ ವಿತರಣೆಯಲ್ಲಿ ಗಣನೀಯ ಸಾಧಕರಿಗೆ ವಿಶೇಷ ಪರಿಗಣನೆ

0


ಪುತ್ತೂರು: ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ವಿತರಣೆಯ ಪ್ರಗತಿ ಪರಿಶೀಲನೆಯ ದೃಷ್ಟಿಯಿಂದ ಪ್ರತಿ ಬೂತ್ ಕಾಂಗ್ರೆಸ್ ಸಮಿತಿಗಳ ಭೇಟಿ ಮತ್ತು ಸಮಾಲೋಚನಾ ಸಭೆಯು ಎ.4ರಿಂದ ಆರಂಭಗೊಳ್ಳಲಿದೆ.

ಈ ಸಂದರ್ಭ ಗ್ಯಾರೆಂಟಿ ಕಾರ್ಡ್ ವಿತರಣೆಯಲ್ಲಿ ಗಣನೀಯ ಸಾಧನೆ ಮಾಡಿದವರನ್ನು ವಿಶೇಷವಾಗಿ ಪರಿಗಣಿಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ತಿಳಿಸಿದ್ದಾರೆ.

ಗ್ರಾಮಾಂತರದ ಎಲ್ಲಾ 16 ವಲಯಗಳ ಹಾಗೂ ನಗರ ವ್ಯಾಪ್ತಿಯ 5 ವಲಯಗಳ 220 ಬೂತ್‌ಗಳಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ತಂಡ ಭೇಟಿ ನೀಡಿ, ಚುನಾವಣಾ ತಯಾರಿ ಸಭೆ ನಡೆಸಿ, ಗ್ಯಾರಂಟಿ ಕಾರ್ಡ್ ರಶೀದಿಗಳನ್ನು ಸಂಗ್ರಹಿಸಲಿದ್ದಾರೆ. ಈ ಸಂದರ್ಭ ಗ್ಯಾರಂಟೀ ಕಾರ್ಡ್ ವಿತರಣೆಯಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಮುಂದಿನ ದಿನಗಳಲ್ಲಿ ವಿಶೇಷವಾಗಿ ಪರಿಗಣಿಸಲಾಗುವುದು. ಬ್ಲಾಕ್ ಕಾಂಗ್ರೆಸ್‌ನ ಎಲ್ಲಾ 16 ವಲಯ ಕಾಂಗ್ರೆಸ್ ಅಧ್ಯಕ್ಷರುಗಳು, ನಗರ ಕಾಂಗ್ರೆಸ್ ಅಧ್ಯಕ್ಷರು ಹಾಗೂ ನಗರ ವ್ಯಾಪ್ತಿಯ 5 ವಲಯಗಳ ಉಸ್ತುವಾರಿಗಳು, ವಲಯ ಉಸ್ತುವಾರಿಗಳು, ಬ್ಲಾಕ್ ಪದಾಧಿಕಾರಿಗಳು, ಎಲ್ಲಾ 220 ಬೂತ್ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರುಗಳು ಗಮನಿಸುವಂತೆ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here