ಮುಂಡೂರು ಶ್ರೀಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಚಂಡಿಕಾ ಹೋಮ, ಅಘೋರ ಹೋಮ, ಮಹಾಗಣಪತಿ ಹೋಮ

0

ನರಿಮೊಗರು: ಮುಂಡೂರು ಶ್ರೀಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ಪ್ರಕಾರ ಎ.1 ಮತ್ತು 2ರಂದು ಪರಿಹಾರ ದಾರ್ಮಿಕ ಕಾರ್ಯಕ್ರಮಗಳು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.

ಎ.1ರಂದು ದೇವತಾ ಪ್ರಾರ್ಥನೆ, ಗಣಪತಿ ಹೋಮ, ಚಂಡಿಕಾ ಹೋಮ, ಸುವಾಸಿನಿ ಆರಾಧನೆ, ಅನ್ನಸಂತರ್ಪಣೆ, ಅಘೋರ ಹೋಮ, ಆವಾಹನೆ, ಬಾಧಾಕರ್ಷಣೆ, ಉಚ್ಚಾಟನೆ, ಪ್ರಸಾದ ವಿತರಣೆ, ಎ.2ರಂದು ಮಹಾಗಣಪತಿ ಹೋಮ, ತಿಲಹೋಮ, ಸಾಯುಜ್ಯ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.

ಪ್ರಧಾನ ಅರ್ಚಕ ರಮೇಶ ಬೈಪಾಡಿತ್ತಾಯರವರು ಮಹಾಪೂಜೆ ನಡೆಸಿದರು. ಸಹಾಯಕ ಅರ್ಚಕ ಶಂಕರನಾರಾಯಣ ಭಟ್ ಸಹಕರಿಸಿದರು. ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಲೋಕಪ್ಪ ಗೌಡ ಕರೆಮನೆ ಸೇರಿದಂತೆ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here