ಕುಂಬ್ರ ಶ್ರೀ ರಾಮ ಭಜನಾ ಮಂದಿರದ 41 ನೇ ವಾರ್ಷಿಕ ಮಂಗಳೋತ್ಸವ ಭಜನೆ ಉತ್ಸವ , ಸತ್ಯನಾರಾಯಣ ಪೂಜೆ, ಯಕ್ಷಗಾನ ಬಯಲಾಟ

0

ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಪೇಟೆಯ ಹೃದಯಭಾಗದಲ್ಲಿರುವ ಕುಂಬ್ರ ಶ್ರೀ ರಾಮ ಭಜನಾ ಮಂದಿರದ 41 ನೇ ವಾರ್ಷಿಕ ಮಂಗಳೋತ್ಸವದ ಪ್ರಯುಕ್ತ ಭಜನೆ ಉತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಮಾನಿಷಾದ’ ಯಕ್ಷಗಾನ ಬಯಲಾಟ ಸೇವೆ ಏ.10 ರಂದು ಮಂದಿರದ ವಠಾರದಲ್ಲಿ ನಡೆಯಿತು.

ವಾರ್ಷಿಕ ಮಂಗಳೋತ್ಸವದ ಅಂಗವಾಗಿ ಬೆಳಿಗ್ಗೆ ಸೂರ್ಯೋದಯದಿಂದ ಸೂರ್ಯಸ್ತಮಾನದ ತನಕ ವಿವಿಧ ತಂಡಗಳಿಂದ ಭಜನೆ ಉತ್ಸವ ನಡೆಯಿತು. ಪುರೋಹಿತರಾದ ಪ್ರಕಾಶ್ ನಕ್ಷತ್ರಿತ್ತಾಯರವರ ನೇತೃತ್ವದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಸೂರ್ಯಸ್ತಮಾನಕ್ಕೆ ಭಜನಾ ಮಹಾ ಮಂಗಳಾರತಿ, ಸಂಜೆ ಕಟೀಲು ಶ್ರೀ ದೇವಿಯ ಮಹಾಪೂಜೆ ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.

ಸುಮಾರು 1200 ಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ 5.45 ಕ್ಕೆ ಕಟೀಲು ಶ್ರೀ ದೇವಿಯ ಪೂಜೆ ನಡೆದುಮಾನಿಷಾದ’ ಎಂಬ ಯಕ್ಷಗಾನ ಬಯಲಾಟ ನಡೆಯಿತು. ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಕಾರ್ಯದರ್ಶಿ ಪದ್ಮನಾಭ ರೈ ಅರೆಪ್ಪಾಡಿ, ಕೋಶಾಧಿಕಾರಿ ಚಂದ್ರಕಾಂತ ಶಾಂತಿವನ, ಉಪಾಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಜತೆ ಕಾರ್ಯದರ್ಶಿ ಆಶಾ ಮಾಧವ ರೈ ಕುಂಬ್ರ, ಸಂಚಾಲಕರುಗಳಾದ ಅರುಣ ರೈ ಬಿಜಳ, ವಿನೋದ್ ಶೆಟ್ಟಿ ಮುಡಾಲ, ಹರಿಪ್ರಸಾದ ಆಳ್ವ ನಿರಾಳ ಮತ್ತು ಸರ್ವ ಸದಸ್ಯರುಗಳು ಸೇರಿದಂತೆ ಊರಪರವೂರು ಸಾವಿರಾರು ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here