ಅಣಿಲೆ ತರವಾಡು ಮನೆಯ ದೈವ-ದೇವರ ವರ್ಷಾವಧಿ ಉತ್ಸವ

0

ಪುತ್ತೂರು: ಬಡಗನ್ನೂರು ಗ್ರಾಮದ ಅಣಿಲೆ ತರವಾಡು ಮನೆಯ ದೈವ-ದೇವರ ವರ್ಷಾವಧಿ ಉತ್ಸವ ಎ. 7 ರಿಂದ 9 ರತನಕ ನಡೆಯಿತು. ಎ. 7 ರಂದು ಬೆಳಿಗ್ಗೆ ಗಣಪತಿ ಹವನ, ಐಕ್ಯಮತ್ಯ ಸೂಕ್ತ ಹೋಮ, ನಾರಾಯಣ ಪೂಜೆ, ಸರಸ್ವತಿ ಪೂಜೆ ಮತ್ತು ನಾಗ ತಂಬಿಲ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ದುರ್ಗಾನಮಸ್ಕಾರ ಪೂಜೆ, ರಾತ್ರಿ ಅನ್ನಸಂತರ್ಪಣೆ ನಡೆಯಿತು.

ಎ. 8 ರಂದು ಬೆಳಿಗ್ಗೆ ಶ್ರೀ ವೆಂಕಟ್ರಮಣ ದೇವರ ಹರಿಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು. ಎ. 9 ರಂದು ಬೆಳಿಗ್ಗೆ ದೈವಗಳಿಗೆ ತಂಬಿಲ ಸೇವೆ, ಕೊರತಿ,ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ಸಮ್ಮನ, ಅನ್ನಸಂತರ್ಪಣೆ, ರಾತ್ರಿ ಗುರುಕಾರ್ನವರಿಗೆ ಅಗೇಲು, ಅನ್ನಸಂತರ್ಪಣೆ ನಡೆಯಿತು.

ಅಣಿಲೆ ತರವಾಡು ಮನೆಯ ಯಜಮಾನ ಅಣಿಲೆ ಕೆಯ್ಯೂರು ಸದಾಶಿವ ರೈ, ಅಣಿಲೆ ತರವಾಡು ಮನೆಯ ಟ್ರಸ್ಟ್‌ನ ಅಧ್ಯಕ್ಷ ಎ.ಕೆ.ಜಯರಾಮ ರೈ ಕೆಯ್ಯೂರು, ಉಪಾಧ್ಯಕ್ಷರುಗಳಾದ ರಾಮಕೃಷ್ಣ ರೈ, ಭಾರತಿ ಅಮ್ಮಣ್ಣ ರೈ, ಅಮ್ಮಣ್ಣ ರೈ ಪಿ.ಬಿ, ಸೋಮಶೇಖರ್ ರೈ, ಪ್ರಧಾನ ಕಾರ್‍ಯದರ್ಶಿ ರಾಜೀವಿ ಎಸ್.ರೈ, ಜೊತೆ ಕಾರ್‍ಯದರ್ಶಿ ಶ್ರೀಜಿತ್ ಶೆಟ್ಟಿ, ಕೋಶಾಧಿಕಾರಿ ಶಶಿಧರ್ ರೈ ಅಣಿಲೆ, ಗೌರವ ಸಲಹೆಗಾರರಾದ ದೇರ್ಲ ಅಮ್ಮಣ್ಣ ರೈ ಪಾಪೆಮಜಲು, ರಮೇಶ್ ರೈ ಎಂ, ದೇವರಾಜ್ ರೈ, ರವೀಂದ್ರ ರೈ ಹಾಗೂ ಅಣಿಲೆ ತರವಾಡು ಮನೆಯ ಎಲ್ಲಾ ಸದಸ್ಯರುಗಳು, ಊರ-ಪರವೂರ ಹಿತೈಷಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here