ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ವತಿಯಿಂದ ಬಹುಮುಖ ಪ್ರತಿಭೆ ತಪಾಸ್ಯ ಕಟೀಲುರವರಿಗೆ ಸನ್ಮಾನ

0


ಪುತ್ತೂರು: ರಕ್ತಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಇದರ ವತಿಯಿಂದ ಬಹುಮುಖ ಪ್ರತಿಭೆ ಕಟೀಲಿನ ತಪಾಸ್ಯ ಅವರ ಮನೆಯಲ್ಲಿ ಅವರ ಹುಟ್ಟು ಹಬ್ಬದ ದಿನವಾದ ಏ. 14 ರಂದು ಅವರನ್ನು ಸನ್ಮಾನ ಮಾಡಲಾಯಿತು.

ಮುಖ್ಯ ಅತಿಥಿಯಾಗಿ ಅಶ್ವಿನಿ ಪೂಜಾರಿ ಕಾರ್ಕಳ,‌ ಶ್ರೀಕೃಷ್ಣ ಯುವಕ ಮಂಡಲ ಸಿಟಿಗುಡ್ಡೆ ಪುತ್ತೂರು ಇದರ ಸದಸ್ಯ, ಸ್ನೇಹ ಸಿಲ್ಕ್ ಅಂಡ್ ರೆಡಿಮೇಡ್ ಬೊಳುವಾರು ಪುತ್ತೂರು ಇದರ ಉದ್ಯೋಗಿ ಬಿ.‌ರಾಜೀವ ಗೌಡ, ತಪಸ್ಯಾರವರ ಹೆತ್ತವರಾದ ಕವಿತಾ ದಿನೇಶ್ ಉಪಸ್ಥಿತರಿದ್ದರು. ಚಿತ್ರನಟ ಕಲಾವಿದ ಕೃಷ್ಣಪ್ಪ ಶಿವನಗರ ಪ್ರಸ್ತಾಪಿಸಿದರು. ಕಾರ್ಯಕ್ರಮದ ರೂವಾರಿ ನವೀನ್ ಪುತ್ತೂರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಈ ವೇಳೆ ಹಲವು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here