ಕೆಯ್ಯೂರು ಕುಣಿತ ಭಜನಾ ತರಬೇತಿ  ಕಾರ್ಯಕ್ರಮ‌ ಉದ್ಘಾಟನೆ

0

ಕೆಯ್ಯೂರು:ಕೆಯ್ಯೂರು ಗ್ರಾಮದ ಕೆಯ್ಯೂರು ಕುಣಿತ ಭಜನಾ ತರಬೇತಿಯನ್ನು  ಶ್ರೀ ದುರ್ಗಾ ಯುವಕ ಮಂಡಲ ಸಭಾಂಗಣದಲ್ಲಿ ಎ14ರಂದು ಶ್ರೀ ಕ್ಷೇತ್ರ ಕೆಯ್ಯೂರು ದೇವಳದ ವ್ಯವಸ್ಥಾಪಾನ ಸಮಿತಿ ಅಧ್ಯಕ್ಷ   ಶಶಿಧರ ರಾವ್ ಬೊಳಿಕಲ  ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಕುಣಿತ ಭಜನಾ ಗುರು ಸದಾನಂದ ಆಚಾರ್ಯ ಕಾಣಿಯೂರು ಭಜನಾ ತರಬೇತಿಯ ಬಗ್ಗೆ  ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ  ಶ್ರೀ ದುರ್ಗಾ ಯುವಕ ಮಂಡಲ ಅಧ್ಯಕ್ಷ ಹರೀಶ್ ಪಾಟಾಳಿ ದೆರ್ಲ, ಕೆಯ್ಯೂರು ಗ್ರಾ.ಪಂ.ಮಾಜಿ ಅದ್ಯಕ್ಷ  ಬಾಬು.ಬಿ, ಕೆಯ್ಯೂರು ಗ್ರಾ.ಪಂ. ಸದಸ್ಯೆ  ಸುಭಾಷಿಣಿ ಸಣಂಗಳ , ಮಕ್ಕಳ ಪೋಷಕರು,  ಉಪಸ್ಥಿತರಿದ್ದರು. ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು ಮಾಜಿ ಅಧ್ಯಕ್ಷ ಶ್ರೀಧರ ಪೂಜಾರಿ ಕೊಡಂಬು ಸ್ವಾಗತಿಸಿ, ಕೆಯ್ಯೂರು ಗ್ರಾ.ಪಂ.ಸದಸ್ಯೆ ಮೀನಾಕ್ಷಿ ವಿ.ರೈ ವಂದಿಸಿದರು.

LEAVE A REPLY

Please enter your comment!
Please enter your name here