ಕೆದಂಬಾಡಿ: ಇದ್ಪಾಡಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ, ಅಗೇಲು ಸೇವೆ

0

ಪುತ್ತೂರು: ಕೆದಂಬಾಡಿ ಗ್ರಾಮದ ಇದ್ಪಾಡಿ ಕೊರಗಜ್ಜ ಸೇವಾ ಸಮಿತಿ ವತಿಯಿಂದ ಇದ್ಪಾಡಿಯಲ್ಲಿರುವ ಕೊರಗಜ್ಜ ಸನ್ನಿಧಿಯಲ್ಲಿ ತಿಂಗಳ ಸಂಕ್ರಮಣ ಅಗೇಲು ಸೇವೆಯು ಸಮಿತಿಯ ಪದಾಧಿಕಾರಿಗಳು ಹಾಗೂ ಊರಭಕ್ತದಿಗಳ ಸಹಕಾರ ದೊಂದಿಗೆ ನಡೆಯಿತು.ಇದೇ ಸಂದರ್ಭದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರವರ 137ನೇ ಜನ್ಮ ದಿನವನ್ನು ಅಚರಿಸಲಾಯಿತು.

ಅಂಬೇಡ್ಕರ್‌ರವರ ಭಾವಚಿತ್ರದ ಎದುರು ಸಂತೊಷ್ ಕುಮಾರ್ ರೈಇದ್ಪಾಡಿ ದೀಪಬೆಳಗಿಸಿ, ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಅಗೇಲು ಸೇವೆಯ ಬಳಿಕ ಭಕ್ತಾಧಿಗಳಿಗೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


ಈ ಸಂಧರ್ಭದಲ್ಲಿ ರಾಧಾಕೃಷ್ಣ ಪೂಜಾರಿ, ಐ. ಪದ್ಮನಾಭ ಗೌಡ. ಯಂ.ಮೋಹನ್ ಪಾಟಾಳಿ ಕೊಡ್ಯಡ್ಕ, ಬಾಬು ಇದ್ಪಾಡಿ. ಸತೀಶ್ ನಾಯ್ಕ್ ಪಟ್ಟೆತ್ತಡ್ಕ, ಹರೀಶ ನಾಯ್ಕ್ ಬೊಳ್ಳಾಡಿ, ನಿತಿನ್ ಕುಮಾರ್.ಐ, ಗೀತಾ ರೈ, ಪುಷ್ಪ. ಕೆ, ಕವಿತಾ ಚಂದ್ರ. ಐ, ಗಿರಿಯ ಐ, ದಾಮೋದರ ಗೌಡ ಐ, ಮೋಹನ ಗೌಡ ಯಂ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಚಂದ್ರ ನಲಿಕೆ ಇದ್ಪಾಡಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here