ಪಡುಬೆಟ್ಟು ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

0

ನೆಲ್ಯಾಡಿ: ಸರಕಾರಿ ಹಿ.ಪ್ರಾ.ಶಾಲೆ ಪಡುಬೆಟ್ಟು ಇಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಆಚರಿಸಲಾಯಿತು.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮುಖ್ಯಗುರು ಜೆಸ್ಸಿ ಕೆ.ಎ.ರವರು ಮಾತನಾಡಿ, ಅಂಬೇಡ್ಕರ್ ಅವರಂತೆ ನಾವು ಕೂಡ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು. ಅವರಂತೆ ನಮ್ಮ ಜೀವನದಲ್ಲಿ ಸಾಧನೆ ಮಾಡಬೇಕು ಎಂದು ತಿಳಿಸಿದರು. ಸಹ ಶಿಕ್ಷಕಿ ಮಮತಾ ಸಿ.ಹೆಚ್.ರವರು ಅಂಬೇಡ್ಕರ್ ಜಯಂತಿಯ ಕುರಿತು ಮಕ್ಕಳಿಗೆ ಮಾಹಿತಿ ನೀಡಿ, ಅಂಬೇಡ್ಕರ್ ಅವರು ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯಲು ಶ್ರಮಿಸುವುದರ ಜೊತೆಗೆ ಮಹಿಳೆಯರ ಸಮಾನತೆಗಾಗಿ ಕೂಡ ಹೋರಾಡಿದವರು. ಅವರ ಆದರ್ಶಗಳು ನಮಗೆ ದಾರಿದೀಪ ಎಂದು ಹೇಳಿದರು. ಸಹಶಿಕ್ಷಕಿ ಸಜಿನ ಕೆ. ಎರೋಡಿ ವಂದಿಸಿದರು. ಸಹಶಿಕ್ಷಕಿಯರಾದ ಲೀಲಾವತಿ, ಕಮಲಾಕ್ಷಿ ಕೆ., ಕವಿತಾ ಡಿ., ಅತಿಥಿ ಶಿಕ್ಷಕಿಯರಾದ ನ್ಯಾನ್ಸಿ ಲಿಝಿ, ರಂಜಿನಿ ಕುಂದರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here