ಎ.19, 20: ನೆಲ್ಯಾಡಿ ಲಹರಿ ಸಂಗೀತ ಕಲಾಕೇಂದ್ರದಿಂದ ಸುಗಮ ಸಂಗೀತ, ಕೀಬೋರ್ಡ್ ತರಬೇತಿ

0

ನೆಲ್ಯಾಡಿ: ಲಹರಿ ಸಂಗೀತ ಕಲಾಕೇಂದ್ರ ಐಐಸಿಟಿ ನೆಲ್ಯಾಡಿ ಇದರ ವತಿಯಿಂದ ಸುಗಮ ಸಂಗೀತ ಮತ್ತು ಕೀಬೋರ್ಡ್ ತರಬೇತಿ ಕಾರ್ಯಾಗಾರ ಎ.19 ಮತ್ತು 20ರಂದು ಬೆಳಿಗ್ಗೆ 10ರಿಂದ ನೆಲ್ಯಾಡಿ ಸಂತಜಾರ್ಜ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.


ಖ್ಯಾತ ವೈದ್ಯ, ಶಾಸ್ತ್ರೀಯ ಸಂಗೀತಗಾರರು, ಕೊಳಲು, ಪಿಟೀಲು ವಾದಕರೂ ಆದ ಡಾ.ರಾಮಕೃಷ್ಣ ಭಟ್, ಖ್ಯಾತ ಹಿನ್ನೆಲೆ ಸಂಗೀತ ನಿರ್ದೇಶಕ, ಕೀಬೋರ್ಡ್ ಮತ್ತು ಗಿಟಾರ್ ವಾದಕ ಬಾಬಣ್ಣ ಪುತ್ತೂರು, ಖ್ಯಾತ ಹಿನ್ನೆಲೆ ಸಂಗೀತ ನಿರ್ದೇಶಕ, ಮಂಗಳೂರಿನ ಚಾಪರ್‍ಕ ತಂಡದ ಗುರು ಬಾಯಾರು, ಖ್ಯಾತ ತಬಲಾ ವಾದಕ, ನಾಟಕ ಸಂಗೀತ ನಿರ್ದೇಶಕ ದಯಾನಂದ ಆಚಾರ್ಯ ವಾಣಿಶ್ರೀ ನೆಲ್ಯಾಡಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಸಂಗೀತಾಸಕ್ತ ಎಲ್ಲಾ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿದೆ ಎಂದು ಲಹರಿ ಸಂಗೀತ ಕಲಾಕೇಂದ್ರದ ಸಂಗೀತ ಗುರು ವಿಶ್ವನಾಥ ಶೆಟ್ಟಿಕೆ., ನಿರ್ದೇಶಕ ಪ್ರಶಾಂತ್ ಸಿ.ಹೆಚ್.ಹಾಗೂ ವ್ಯವಸ್ಥಾಪಕಿ ಶ್ರೀಮತಿ ಅನಿತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here