ಹೊಟೇಲ್ ಸುಜಾತಾ ಮಾಲಕರಿಂದ ಸೇವಾರ್ಥವಾಗಿ ಮಣ್ಣಾಪು ಕ್ಷೇತ್ರದಲ್ಲಿ ಕೊರಗಜ್ಜ ದೈವದ ಹರಕೆ ನೇಮೋತ್ಸವ

0

ಪುತ್ತೂರು: ನಗರದ ಮುಖ್ಯರಸ್ತೆಯಲ್ಲಿ ವ್ಯವಹರಿಸುತ್ತಿರುವ ಹೊಟೇಲ್ ಸುಜಾತಾ ಮಾಲಕರಾದ ಶ್ರೀಮತಿ ಮತ್ತು ಶ್ರೀ ಸುಶಾಮ್ ಶೆಟ್ಟಿ ಮತ್ತು ಮಕ್ಕಳಿಂದ ಸೇವಾರ್ಥವಾಗಿ ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಎ.19 ರಂದು ರಾತ್ರಿ ಕೊರಗಜ್ಜ ದೈವದ ಹರಕೆ ನೇಮೋತ್ಸವ ನಡೆಯಿತು.


ಈ ನೇಮೋತ್ಸವದಲ್ಲಿ ಹೊಟೇಲ್ ಸುಜಾತಾ ಮಾಲಕರಾದ ಸುಶಾಮ್ ಶೆಟ್ಟಿ ದಂಪತಿ ಹಾಗೂ ಮಕ್ಕಳು, ಸುಶಾಮ್ ಶೆಟ್ಟಿ ಕುಟುಂಬಿಕರು ಹಾಗೂ ಬಂಧುಮಿತ್ರರು, ಹಿತೈಷಿಗಳು, ಮಣ್ಣಾಪು ಕೊರಗಜ್ಜ ಕ್ಷೇತ್ರದ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ಅಧ್ಯಕ್ಷ ವಿಶ್ವನಾಥ ಮಣ್ಣಾಪು, ಉಪಾಧ್ಯಕ್ಷ ವಿಶ್ವನಾಥ ಪೂಜಾರಿ ಮೊಟ್ಟೆತ್ತಡ್ಕ, ಗೌರವ ಸಲಹೆಗಾರ ವಿಶ್ವನಾಥ ನಾಯ್ಕ ಅಮ್ಮುಂಜ, ಅರ್ಚಕರಾದ ಕುಂಡ ಮಣ್ಣಾಪು, ಅಣ್ಣು ಮಣ್ಣಾಪು, ರವಿ ಮಣ್ಣಾಪು, ಮಧ್ಯಸ್ತ ಗಣೇಶ್ ಪೂಜಾರಿ ಕೆಮ್ಮಿಂಜೆ, ಪ್ರಮುಖರಾದ ಉಮೇಶ್ ಮಣ್ಣಾಪು, ದಿನೇಶ್ ಕೆಮ್ಮಿಂಜೆ, ಕೇಶವ ಮಣ್ಣಾಪು, ಗಂಗಾಧರ ಮಣ್ಣಾಪು, ಗುರುವ ಮಣ್ಣಾಪು, ಸುಜಿರ್ ಕುಮಾರ್ ಶೆಟ್ಟಿ ನುಳಿಯಾಲು ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here