ಉಪ್ಪಿನಂಗಡಿ: ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ಧಿ ಮಹೋತ್ಸವದ ಅಂಗವಾಗಿ ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇಗುಲದಿಂದ ಪುತ್ತೂರು ಶ್ರೀ ವೆಂಕಟರಮಣ ದೇವಾಲಯಕ್ಕೆ ಗುರು ಸಂಕೀರ್ತನ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು.
ಡಿ.12ರ ಅಪರಾಹ್ನ 3.30ಕ್ಕೆ ಶ್ರೀ ದೇವಾಲಯದ ನಡೆ ತೆರೆದು ಸಾಮೂಹಿಕ ಪ್ರಾರ್ಥನೆ ಬಳಿಕ ದೇವಾಲಯದ ಆಡಳಿತ ಮೋಕ್ತೆಸರಾದ ಬಿ.ಗಣೇಶ ಶೆಣೈ ಪಾದಯಾತ್ರೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮೋಕ್ತೆಸರಾದ ಕೆ.ಅನಂತರಾಯ ಕಿಣಿ, ಪಿ.ದೇವಿದಾಸ ಭಟ್, ಭಜನಾ ಮಂಡಳಿಯ ಅಧ್ಯಕ್ಷ ಪಿ.ಹರೀಶ ಪೈ, ಕೆ.ಸತೀಶ ಕಿಣಿ, ಕೆ.ಗೋಕುಲದಾಸ್ ಭಟ್, ಎಚ್.ರಾಘವೇಂದ್ರ ಪ್ರಭು, ಎಂ.ಸತ್ಯ ಪ್ರಸಾದ್ ಭಟ್ ಲಕ್ಷ್ಮೀನಗರ, ಎಂ.ಶ್ರೀನಿವಾಸ ಭಟ್, ಕರಾಯ ಗಣೇಶ ನಾಯಕ್, ಎಚ್. ವಿನಾಯಕ್ ಪ್ರಭು, ಕೆ.ಗಿರಿಧರ್ ನಾಯಕ್, ಎಂ.ಮಂಜುಳೇಶ ಭಟ್, ಕೆ.ಮಾಧವ ನಾಯಕ್, ನಂದಾವರ ಯೋಗೀಶ ಶೆಣೈ, ಕೆ.ಜಗದೀಶ ನಾಯಕ್, ಕರಾಯ ಗಿರೀಶ್ ನಾಯಕ್, ದೇವಾಲಯದ ವ್ಯವಸ್ಥಾಪಕ ಕೆ.ರಾಮಕೃಷ್ಣ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
