ಕಾಣಿಯೂರು : ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ ಪುತ್ತೂರು ಇಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ. ತುಳು ಭಾಷಣ ಶ್ರಾವ್ಯ ರೈ (10ನೇ) ಪ್ರಥಮ, ಜನಪದ ನೃತ್ಯ ರಿತಿಕಾ ರೈ (10 ನೇ), ಜಾನ್ವಿ ಎಂ ವಿ (8 ನೇ ), ಅಸ್ಮಿ ಕೆ ಪಿ (8 ನೇ), ಸಾನ್ವಿ ಎಂ ಸಿ (9ನೇ), ದೀಕ್ಷಾ ಎಚ್ ಎನ್ (8 ನೇ), ಸಾನಿಧ್ಯ ಎಸ್ ಯು (8ನೇ), ವಿಕಾಸ್ (9ನೇ), ಬಿಪಿನ್ ಎನ್ ಆರ್ (9ನೇ)ಪ್ರಥಮ ಸ್ಥಾನವನ್ನು ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಕವನವಾಚನ ಶ್ರಾವ್ಯ ರೈ(10ನೇ) ದ್ವಿತೀಯ, ಚರ್ಚಾಸ್ಪರ್ಧೆ ವಿಜ್ಞಾತ್ರಿ ಬಿ (10ನೇ) ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಹಾಗೆಯೇ ಕನ್ನಡ ಮಾಧ್ಯಮ ವಿಭಾಗದಲ್ಲಿ ತುಳು ಭಾಷಣದಲ್ಲಿ ನಿರೀಕ್ಷಾ (10ನೇ) ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರಿಗೆ ಮುಖ್ಯಗುರು ನಾರಾಯಣ ಭಟ್, ಸಂಸ್ಥೆಯ ನೃತ್ಯಗುರು ಅಶೋಕ್ ಬೆಳ್ಳಾರೆ, ಶಿಕ್ಷಕಿಯರಾದ ಕವಿತಾ ವಿ ರೈ, ಚಿತ್ರಕಲಾ ಎಂ, ಜಯಶೀಲ ಕೆ, ವಿಮಲ ಸಿ ಎಚ್ ಸೂಕ್ತ ಮಾರ್ಗದರ್ಶನ ನೀಡಿರುತ್ತಾರೆ.
