ಪಂಚಮುಖಿ ಆಂಜನೇಯನಿಗೆ ಪೂಜೆ ಸಲ್ಲಿಸಿದ ಸಂಸದ ತೇಜಸ್ವಿ ಸೂರ್ಯ ಮತ್ತು ನಟಿ ಶೃತಿ

0

ಪುತ್ತೂರು : ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಈಶ್ವರಮಂಗಲದ ಹನುಮಗಿರಿಯ, ಪಂಚಮುಖಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಖ್ಯಾತ ಚಿತ್ರ ನಟಿ ಮತ್ತು ಬಿಜೆಪಿ ನಾಯಕಿ ಶೃತಿ ಜತೆಗಿದ್ದರು. ಪುತ್ತೂರಿನಲ್ಲಿ ಆಶಾ ತಿಮ್ಮಪ್ಪ ಗೌಡ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹನುಮಗಿರಿ ದೇವಸ್ಥಾನಕ್ಕೆ ಭೇಟಿ ಅಲ್ಲಿಂದಲೇ ಹೆಲಿಕಾಪ್ಟರ್‌ ಮೂಲಕ ಬೈಂದೂರಿಗೆ ತೆರಳಿದರು. ಈ ವೇಳೆ ನಾಗರಾಜ್‌ ನಡುನಡ್ಕ, ಆರ್‌ ಸಿ ನಾರಾಯಾಣ, ಸೀತರಾಮ ರೈ ಕೆದಂಬಾಡಿ ಗುತ್ತು, ಸಹಜ್‌ ರೈ, ರಾಜೇಶ್‌ ಕಾವೇರಿ, ಧರ್ಮದರ್ಶಿ ಶಿವರಾಮ್‌ ಸಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here