ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗದಿಂದ ಅನಾರೋಗ್ಯ ಪೀಡಿತ ಯುವಕನಿಗೆ ಧನ ಸಹಾಯ ವಿತರಣೆ

0

ಪುತ್ತೂರು: ಸ್ವಸ್ತಿಕ್ ಗೆಳೆಯರ ಬಳಗ ನೆಕ್ಕಿಲು ಇದರ ವತಿಯಿಂದ ಅನಾರೋಗ್ಯ ಪೀಡಿತ ಯುವಕನೋರ್ವನಿಗೆ ಧನ ಸಹಾಯ ಮಾಡಲಾಯಿತು. ನೆರೋಳ್ತಡ್ಕ ನಿವಾಸಿ ಕುಂಞ ಮುಗೇರ ಮತ್ತು ಕಮಲ ದಂಪತಿಗಳ ಪುತ್ರ, ಕೂಲಿ ಕೆಲಸ ಮಾಡಿ ತನ್ನ ಕುಟುಂಬಕ್ಕೆ ಆಸರೆಯಾಗಿದ್ದ ಮನೋಹರ(30.ವ) ಅವರು ಇವರು ಅನೇಕ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇವರಿಗೆ ಸಂಘದ ವತಿದಿಂದ ಆರ್ಥಿಕ ಸಹಾಯವನ್ನು ಸಂಘದ ಅಧ್ಯಕ್ಷ ಹರೀಶ್ ನಾಯ್ಕ (ಚೆಕ್) ವಿತರಿಸಿದರು.

ಈ ಸಂದರ್ಭದಲ್ಲಿ ಸ್ವಸ್ತಿಕ್ ಗೆಳೆಯರ ಬಳಗದ ಗೌರವಾಧ್ಯಕ್ಷ ಸುಂದರ ಬಲ್ಯಾಯ ನೆಕ್ಕಿಲು, ಗೌರವ ಸಲಹೆಗಾರ ಅಶೋಕ್ ನಾಯ್ಕ ನೆಕ್ಕಿಲು, ಸಂಘದ ಕಾರ್ಯದರ್ಶಿ ವಿಘ್ನೇಶ್ ಬಲ್ಯಾಯ ನೆಕ್ಕಿಲು, ಕೋಶಾಧಿಕಾರಿ ಸುಬ್ರಹ್ಮಣ್ಯ ಶರತ್, ಸದಸ್ಯರುಗಳಾದ ದೀಕ್ಷಿತ್ ಬಲ್ಯಾಯ ನೆಕ್ಕಿಲು, ಮೋಕ್ಷಿತ್ ಬಲ್ಯಾಯ ನೆಕ್ಕಿಲು, ಭರತ್ ನಾಯ್ಕ್, ಬಾಲಚಂದ್ರ ನಾಯ್ಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here