![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುಣಚ : ಕೇಪು ಗ್ರಾಮದ ಕಲ್ಲಂಗಳಗುತ್ತು ತರವಾಡು ಮನೆಯಲ್ಲಿ ಧರ್ಮದೈವ ಧೂಮಾವತಿ ಹಾಗೂ ಪರಿವಾರ ದೈವಗಳ ನೇಮೋತ್ಸವವು ಇಂದಿನಿಂದ ನಡೆಯಲಿದ್ದು ಬೆಳಿಗ್ಗೆ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಯವರ ನೇತ್ರತ್ವದಲ್ಲಿ ಗಣಪತಿಹೋಮ, ನಾಗ ತಂಬಿಲ, ಆಶ್ಲೇಷ ಪೂಜೆ, ಶ್ರೀವೆಂಕಟ್ರಮಣ ದೇವರ ದರ್ಶನ ಹರಿಸೇವೆ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು.
![](https://puttur.suddinews.com/wp-content/uploads/2023/04/IMG_20230422_130645.jpg)
ಸಂಜೆ ದೈವಗಳ ಭಂಡಾರ ತೆಗೆದು, ಪಡಿಅಕ್ಕಿ, ಎಣ್ಣೆ ಕೊಡುವುದು, ನಂತರ ತರವಾಡು ಮನೆಯ ಎದುರು ಕೊರತಿ ದೈವದ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಬಳಿಕ ರಾತ್ರಿ ಕಲ್ಲುರ್ಟಿ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಲಿದೆ.
![](https://puttur.suddinews.com/wp-content/uploads/2023/04/IMG-20230422-WA0011.jpg)
![](https://puttur.suddinews.com/wp-content/uploads/2023/04/IMG-20230422-WA0012.jpg)
![](https://puttur.suddinews.com/wp-content/uploads/2023/04/IMG-20230422-WA0007.jpg)