ಚಿಕ್ಕಮುಡ್ನೂರು: ರಸ್ತೆ ದಾಟುತ್ತಿದ್ದ ಬಾಲಕಿಗೆ ಚುನಾವಣಾ ಪ್ರಚಾರದ ಕಾರು ಅಪಘಾತ – ಪ್ರಕರಣ ದಾಖಲು

0

ಪುತ್ತೂರು: ರಸ್ತೆ ದಾಟುತ್ತಿದ್ದ ಬಾಲಕಿಯೊಬ್ಬರಿಗೆ ಬಿಜೆಪಿಯ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ಕಾರೊಂದು ಡಿಕ್ಕಿಯಾದ ಘಟನೆ ಎ.21ರಂದು ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಕೆರೆಮೂಲೆ ಸಮೀಪ ನಡೆದ ಬಗ್ಗೆ ವರದಿಯಾಗಿದೆ.

ಚಿಕ್ಕಮುಡ್ನೂರು ಗ್ರಾಮದ ಕೆರೆಮೂಲೆ ನಿವಾಸಿ ಮಹಮ್ಮದ್ ಆಶೀಫ್ ಎಂಬವರ ಪುತ್ರಿ ಆಯಿಷಾತ್ ಶೈಮ(5ವ) ಎಂಬವರು ಗಾಯಾಳು. ಅವರು ರಸ್ತೆ ದಾಟುತ್ತಿದ್ದ ವೇಳೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಪ್ರಚಾರಕ್ಕೆ ತೆರಳುತ್ತಿದ್ದ ಕುಂತೂರು ಕುಂಡಡ್ಕದ ಸುರೇಶ್ ಎಂಬವರಿಗೆ ಸೇರಿದ ಕಾರೊಂದು ಬಾಲಕಿಗೆ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಬಾಲಕಿ ಗಾಯಗೊಂಡಿದ್ದು ತಕ್ಷಣ ಹಿಂಬದಿಯಿಂದ ಬರುತ್ತಿದ್ದ ಇನ್ನೊಂದು ಕಾರಿನಲ್ಲಿದ್ದ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಬಾಲಕಿಯನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಇಂಡಿಯಾನ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ಬಾಲಕಿಯ ಸೂಕ್ತ ಚಿಕಿತ್ಸೆಗಾಗಿ ಆಶಾ ತಿಮ್ಮಪ್ಪ ಅವರು ತಮ್ಮ ಪಕ್ಷದ ಓರ್ವರನ್ನು ಮಂಗಳೂರು ಆಸ್ಪತ್ರೆಗೂ ಕಳುಹಿಸಿದ್ದರು.

ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು:

ಗಾಯಾಳು ಬಾಲಕಿಯ ತಂದೆ ಕೆರೆಮೂಲೆ ನಿವಾಸಿ ಮಹಮ್ಮದ್ ಆಶೀಪ್ ಎಂಬವರು ನೀಡಿದ ದೂರಿನಂತೆ ಅಪಘಾತ ಎಸಗಿದ ಕಾರಿನ ಮೇಲೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here