ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರಿಂದ ಲಂಚ ಭ್ರಷ್ಟಾಚಾರ ವಿರುದ್ಧ ಪ್ರತಿಜ್ಞೆ ಸ್ವೀಕಾರ

0

ಅಧಿಕಾರಿಗಳು ಲಂಚ ಭ್ರಷ್ಟಾಚಾರದಿಂದ ಪಡೆದ ಹಣ ಜನರಿಗೆ ಹಿಂತಿರುಗಿಸುವ ಘೋಷಣೆ

ಪುತ್ತೂರು: ಲಂಚ ಭ್ರಷ್ಟಾಚಾರದ ವಿರುದ್ಧ ಸುದ್ದಿ ಪತ್ರಿಕೆಯು ಹೋರಾಟ ಮಾಡಿದ ಎಲ್ಲಾ ಸಂದರ್ಭದಲ್ಲೂ ನಾವು ಅದನ್ನು ಬೆಂಬಲಿಸಿದ್ದೇವೆ. ಈ ಬಾರಿಯ ಚುನಾವಣಾ ಪ್ರಣಾಳಿಕೆಯಲ್ಲೂ ಈ ವಿಚಾರ ಇದೆ. ಲಂಚ ಭ್ರಷ್ಟಾಚಾರ ಮುಕ್ತ ಆಡಳಿತ ಈ ಕ್ಷೇತ್ರದಲ್ಲಿ ಇರಬೇಕು, ಲಂಚ ಭ್ರಷ್ಟಾಚಾರಕ್ಕೆ ಯಾವುದೇ ಆಸ್ಪದಗಳು ಇರದಂತೆ ಕಾರ್ಯನಿರ್ವಹಿಸುತ್ತೇವೆ ಎಂದು ನಾನು ಕೂಡ ಪ್ರತಿಜ್ಞೆ ಮಾಡುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.

ಲಂಚ ಭ್ರಷ್ಟಾಚಾರದ ವಿರುದ್ಧದ ಸುದ್ದಿ ಜನಾಂದೋಲನ ವೇದಿಕೆಯ ಆಂದೋಲನಕ್ಕೆ ಜನಪ್ರತಿನಿಧಿಯ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಯ ಹಿನ್ನೆಲೆಯಿಂದ ಪೂರ್ಣಪ್ರಮಾಣದ ಬೆಂಬಲ ನೀಡುತ್ತಿದ್ದೇನೆ. ಈ ಕ್ಷೇತ್ರದಲ್ಲಿ ಲಂಚ ಭ್ರಷ್ಟಾಚಾರ ನಡೆದರೆ ಅಧಿಕಾರಿಗಳು ಜನರಿಂದ ವಸೂಲಿ ಮಾಡಿರುವ ಲಂಚದ ಹಣವನ್ನು ಮತ್ತೆ ಹಿಂತೆಗೆದುಕೊಡುವಂತಹ ವ್ಯವಸ್ಥೆಯಡಿ ಮುಂದಿನ ದಿನಗಳಲ್ಲಿ ಹೆಜ್ಜೆಯನ್ನಿಡಲಿದ್ದೇವೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.

LEAVE A REPLY

Please enter your comment!
Please enter your name here