ಲಕ್ಷಾಂತರ ರೂಪಾಯಿ ಮೊಬೈಲ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪತ್ರಿಕಾ ಸಾಗಾಟಕ ಜಯಂತ್ ವಿಟ್ಲ

0

ಪುತ್ತೂರು: ಆರ್ಯಾಪು ಗ್ರಾಮದ ವಳತ್ತಡ್ಕ ನಿವಾಸಿ ತೌಸೀಫ್ ರವರು ಕಳೆದುಕೊಂಡಿದ್ದ ಸುಮಾರು 1.35 ಲಕ್ಷ ರೂಪಾಯಿ ಬೆಲೆಬಾಳುವ ಮೊಬೈಲ್ ಹಿಂತಿರುಗಿಸುವ ಮೂಲಕ ಪತ್ರಿಕೆ ಸಾಗಾಟ ಮಾಡುವ ಜಯಂತ ವಿಟ್ಲರವರ ಪ್ರಾಮಾಣಿಕತೆ ಮೆರೆದಿದ್ದಾರೆ.

ಕಾರಿನಲ್ಲಿ ಮಂಗಳೂರಿನಿಂದ ಸುಳ್ಯಕ್ಕೆ ದಿ ಹಿಂದು ಇಂಗ್ಲಿಷ್ ಪತ್ರಿಕೆಯ ಸಾಗಾಟ ಮಾಡುತ್ತಿರುವ ಜಯಂತ ವಿಟ್ಲರವರಿಗೆ ಎ.23ರಂದು ರಾತ್ರಿ ಮಂಗಳೂರಿನ ಕಂಕನಾಡಿ ರಾಧಾ ಮೆಡಿಕಲ್ ಬಳಿ ರಸ್ತೆಯಲ್ಲಿ ಐಫೋನ್‌ ಮೊಬೈಲ್ ಬಿದ್ದು ಸಿಕ್ಕಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಎ.24ರಂದು ಮೊಬೈಲ್ ನಲ್ಲಿದ್ದ ನಂಬರ್ ಮೂಲಕ ಸಂಪರ್ಕಿಸಿ ಮೊಬೈಲ್ ವಾರಿಸುದಾರರಾಗಿರುವ ಪುತ್ತೂರಿನ ವಳತ್ತಡ್ಕ ತೌಸೀಫ್ ರವರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

LEAVE A REPLY

Please enter your comment!
Please enter your name here