ಮುಂಡೂರು:ಭರಾಟೆಯ ಚುನಾವಣಾ ಪ್ರಚಾರ-ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

0

ಪುತ್ತೂರು : ರಾಜಕೀಯ ಪಕ್ಷಗಳ ಮತ ಬೇಟೆ ತೀವ್ರತೆ ಪಡೆದಿದ್ದು, ಕ್ಷೇತ್ರದ ಉದ್ದಗಲಕ್ಕೂ ಅಲ್ಲಲ್ಲಿ ಚುನಾವಣಾ ಪ್ರಚಾರ ಸಭೆ ನಡೆಯುತ್ತಿದೆ. ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಭರಾಟೆಯ ಪ್ರಚಾರ ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ನೇತೃತ್ವದಲ್ಲಿ ಇಂದು ಮುಂಡೂರಿನಲ್ಲಿ ಚುನಾವಣಾ ಪ್ರಚಾರ ಸಭೆ ನಡೆಯಿತು.

ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೂ ಅಭಿವೃದ್ಧಿ ಶೂನ್ಯವಾಗಿದೆ, ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಬೆಂಬಲಿಸುವಂತೆ ಅಶೋಕ್ ಕುಮಾರ್ ರೈ ಕರೆ ನೀಡಿದರು. ನೂರಾರು ಜನರು ಸೇರಿದ್ದ ಈ ಸಭೆಯಲ್ಲಿ ತಿಮ್ಮಪ್ಪ ಪುತ್ತಿಲ, ವಿಶ್ವನಾಥ ನರಿಮೊಗರು, ಗಿರಿಯಪ್ಪ ಅಶೋಕ್ ಕುಮಾರ್ ರೈ ನೇತ್ರತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ಕಾವು ಹೇಮನಾಥ ಶೆಟ್ಟಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಮುಂಡೂರು ಸಿ ಎ ಬ್ಯಾಂಕ್ ನಿರ್ದೇಶಕಿ ಗುಲಾಬಿ, ಶಾರದಾ ಬಂಡಿಕಾನ, ಎಂ ಎಸ್‌ ಮಹಮ್ಮದ್‌, ಬ್ಲಾಕ್‌ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಮಹಮ್ಮದ್‌ ಬಡಗನ್ನೂರು, ಸುರೇಶ್‌ ಕುಮಾರ್‌ ಸೊರಕೆ, ಕೆಪಿಸಿಸಿ ವಕ್ತಾರ ಅಮಲಾ ರಾಮಚಂದ್ರ, ವೀಕ್ಷಕ ಮುರಳೀಧರ ಮಠಂತಬೆಟ್ಟು, ಪ್ರವೀಣ್‌ ಚಂದ್ರ ಆಳ್ವ, ಉಮಾನಾಥ್‌ ಶೆಟ್ಟಿ, ಶಕೂರ್‌ ಹಾಜಿ, ಎಂ ಪಿ ಅಬೂಬಕ್ಕರ್‌, ವೇದನಾಥ ಸುವರ್ಣ, ಯಾಕೂಬ್ ಮುಲಾರ್, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here