![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಹೊಸಬೆಳಕು ಬಡವರ ಆಶಾಕಿರಣ ಆರ್ಲಪದವು ಶ್ರೀ ಕೃಷ್ಣ ಯುವಕ ಮಂಡಲ ಸೀಟಿಗುಡ್ಡೆ ಪುತ್ತೂರು, ನೊಂದವರ ಪಾಲಿಗೆ ಆಸರೆ ತಂಡ ಪುತ್ತೂರು ಇದರ ಸದಸ್ಯರು ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರೋತ್ಸವ ಸಂದರ್ಭದಲ್ಲಿ ಜನರಿಂದ ಸಂಗ್ರಹಿಸಿದ ಮೊತ್ತವನ್ನು ಕರುಳು ಸಂಬಂಧಿತ ರೋಗದಿಂದ ಬಳಲುತ್ತಿರುವ ಮಂಗಳೂರಿನ ಗೌರವ್ ಎಂಬವರಿಗೆ ನೀಡಿ ಮಾನವೀಯ ಧರ್ಮವನ್ನು ಎತ್ತಿ ಹಿಡಿದಿದೆ. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಯುವಕ ಮಂಡಲದ ಅಧ್ಯಕ್ಷ ಬಿ ರಾಜೀವ ಗೌಡ, ಜೆ ಪಿ ಸಂತೋಷ್ ಮುರ, ಉದ್ಯಮಿ ಜಯರಾಮ ರೈ, ಜ್ಞಾನ ರೈ, ಪೂರ್ಣಿಮಾ ನೆಟ್ಟಣಿಗೆ, ಅಪೂರ್ವ ರೈ, ವೈಷ್ಣವಿ, ವಿಜಯ ಉಪಸ್ಥಿತರಿದ್ದರು.
![](https://puttur.suddinews.com/wp-content/uploads/2023/04/3a815da3-de9f-4ef0-afd9-6bb0e742e2fa.jpg)