ಪುತ್ತೂರು ವಿವೇಕ ಜಾಗ್ರತ ಬಳಗದವರಿಂದ ಮಳೆಗಾಗಿ ವರುಣ ಮಂತ್ರ ಜಪ ಕಾರ್ಯಕ್ರಮ

0

ಪುತ್ತೂರು: ಪುತ್ತೂರು ವಿವೇಕ ಜಾಗ್ರತ ಬಳಗದ ಆಶ್ರಯದಲ್ಲಿ ವರುಣ ಮಂತ್ರ ಜಪ ಕಾರ್ಯಕ್ರಮ ಕೆಮ್ಮಾಯಿ, ತಾರಿಗುಡ್ಡೆ, ಪಡೀಲು, ದರ್ಬೆ, ಕುಕ್ಕರಬೆಟ್ಟು, ಉಪ್ಪಿನಂಗಡಿ, ವಿಟ್ಲ, ನೆಲಪ್ಪಾಲು ನಗರಗಳಲ್ಲಿ ನಡೆಯಿತು. 11 ದಿನ, 11 ಮನೆ, ಕನಿಷ್ಠ 11 ಮಂದಿಯೊಂದಿಗೆ ಒಗ್ಗಟ್ಟಾಗಿ ಸೇರಿ ನಡೆಸುವ ವರುಣ ಮಂತ್ರ ಜಪದ ಕಾರ್ಯಕ್ರಮವು ಡಿವೈನ್ ಪಾರ್ಕ್‌ ಸಾಲಿಗ್ರಾಮ (ರಿ) ಸಂಸ್ಥೆಯ ಆಧ್ಯಾತ್ಮಕ ಗುರುಗಳಾದ ಶ್ರೀಮಾನ್‌ ಚಂದ್ರಶೇಖರ್‌ ಉಡುಪ(ಡಾಕ್ಟರ್‌ ಜೀ)ಯವರ ಮಾರ್ಗರ್ಶನದಲ್ಲಿ ನಡೆಯುತ್ತದೆ.

ಅನಾವೃಷ್ಠ ದೂರವಾಗಲು, ಸಮೃದ್ಧ ಮಳೆಯಾಗಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ ನಾನಾ ಜಿಲ್ಲೆಗಳಲ್ಲಿ, ವಿವೇಕ ಜಾಗ್ರತ ಬಳಗಗಳು ಈ ವರುಣ ಮಂತ್ರ ಜಪ ನಡೆಸುತ್ತಲೇ ಬಂದಿದ್ದಾರೆ ಎಂದು ಅಧ್ಯಕ್ಷರು ಹಾಗೂ ಸರ್ವಸದಸ್ಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here