ಪುತ್ತೂರು :ಎಮ್‌ ಎಮ್‌ ಸೆಕೆಂಡ್ ಹ್ಯಾಂಡ್ ವೆಹಿಕಲ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ದಿವ್ಯಪ್ರಭಾ ಗೌಡ ಭಾಗಿ

0

ಪುತ್ತೂರು : ಪುತ್ತೂರು ತಾಲೂಕಿನ ಕುಂಬ್ರದಲ್ಲಿ ಇಂದು ಎಂ.ಎಂ ಶರ್ಫುದ್ದಿನ್ ಮಾಲಕತ್ವದ ಎಂ.ಎಂ ಸೆಕೆಂಡ್ ಹ್ಯಾಂಡ್ ವೆಹಿಕಲ್ಸ್ ಸಂಸ್ಥೆ ಉದ್ಘಾಟನೆ ನಡೆಯಿತು. ಉದ್ಘಾಟನೆಯನ್ನು ಕೆಪಿಸಿಸಿ ಸಂಯೋಜಕರಾದ ಹೇಮನಾಥ ಶೆಟ್ಟಿ ಕಾವು ನೆರವೇರಿಸಿದರು.

ನಂತರ ನಡೆದ ಲಕ್ಕಿ ಡ್ರಾ ಕಾರ್ಯಕ್ರಮವನ್ನು ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ದಿವ್ಯ ಪ್ರಭಾ ಗೌಡ ನೆರವೇರಿಸಿದರು ಹಾಗೂ ರಂಗಭೂಮಿ ಕಲಾವಿದ ಹಾಗೂ ಚಿತ್ರ ನಟ ಸುಂದರ್ ರೈ ಮಂದಾರ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಅಬ್ದುಲ್ ಕರೀಮ್ ಉಸ್ತಾದ್ ಸೋಮಂತ್ತಡ್ಕ ಪ್ರಾರ್ಥನೆ ಮಾಡಿ ಶುಭ ಹಾರೈಸಿದರು. ಲಕ್ಕಿ ಡ್ರಾ ವಿಜೇತರಾದ ಬಾತಿಷ್ ಅವರಿಗೆ ಬೈಕನ್ನು ಹೇಮನಾಥ ಶೆಟ್ಟಿ ಹಸ್ತಾಂತರಿಸಿದರು.ಕುಂಬ್ರ ವರ್ತಕರ ಸಂಘದ ಅಧ್ಯಕ್ಷರು ರಫೀಕ್ ಅಲ್ ರಾಯ, ಒಳಮೊಗ್ರು ಗ್ರಾಮ ಪಂಚಾಯಿತಿ ಸದಸ್ಯರಾದ ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here