ಹೇಮನಾಥ ಶೆಟ್ಟಿ, ಅಶೋಕ್‌ ರೈ ಮತ್ತು ಅನಿತಾ ಹೇಮನಾಥ ಶೆಟ್ಟಿ, ಸುಮಾ ಅಶೋಕ್‌ ರೈ ಜೋಡಿಯಿಂದ ಭರ್ಜರಿ ಪ್ರಚಾರ

0

ಪುತ್ತೂರು: ಪುತ್ತೂರಿನ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕ್ಷೇತ್ರದ ಗಲ್ಲಿಗಲ್ಲಿಗಳಲ್ಲಿ ವಿವಿಧ ಪಕ್ಷಗಳ ಮುಖಂಡರು ಕಾರ್ಯಕರ್ತರಿಂದ ಪ್ರಚಾರ ನಡೆಯುತ್ತಿದೆ. ಬೆಳಿಗ್ಗೆಯಿಂದ ಆರಂಭಗೊಂಡ ಪ್ರಚಾರ ಯಾತ್ರೆಯು ತಡ ರಾತ್ರಿ ನಿಗದಿತ ಸಮಯದವರೆಗೆ ನಡೆಯುತ್ತಿದೆ.

ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಪರ ಪ್ರಚಾರದಲ್ಲಿ ಹಲವು ನಾಯಕರು ,ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ. ರೈಗಳ ಜೊತೆ ಕೆಲವು ನಾಯಕರಿದ್ದರೆ, ಗ್ರಾಮೀಣ ಭಾಗದಲ್ಲಿ ಕಾರ್ಯಕರ್ತರ ತಂಡ, ಬೂತ್, ವಲಯ ಅಧ್ಯಕ್ಷರುಗಳ ತಂಡವೊಂದು ನಿರಂತರ ಮತ ಬೇಟೆಯಲ್ಲಿ ತೊಡಗಿಸಿಕೊಂಡಿದೆ. ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ದಂಪತಿಗಳು ಈ ಬಾರಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಚಾರ ಕಾರ್ಯ ಪ್ರಾರಂಭಗೊಂಡ ದಿನದಿಂದ ದಂಪತಿಗಳ ಪ್ರಚಾರ ಆರಂಭಗೊಂಡಿದೆ. ಹೇಮನಾಥ ಶೆಟ್ಟಿಯವರು ಅಶೋಕ್ ರೈ ಜೊತೆಗಿದ್ದರೆ ಅನಿತಾ ಹೇಮನಾಥ ಶೆಟ್ಟಿಯವರು ಅಶೋಕ್ ರೈ ಪತ್ನಿ ಸುಮಾ ಎ ರೈ ಜೊತೆಗಿದ್ದಾರೆ. ಸಾರ್ವಜನಿಕ ಸಮಾರಂಭಗಳಲ್ಲಿ ಹೇಮನಾಥ ಶೆಟ್ಟಿ ಭಾಷಣ ಮಾಡಿ ಕಾರ್ಯಕರ್ತರನ್ನು ಹುರಿದುಂಬಿಸಿದರೆ ಇತ್ತ ಅನಿತಾ ಹೇಮನಾಥ ಶೆಟ್ಟಿಯವರು ಸುಮಾ ಅವರ ಜೊತೆ ಮನೆ ಮನೆ ಭೇಟಿಯಲ್ಲಿ ಕಾರ್ಯಪೃವೃತ್ತರಾಗಿದ್ದಾರೆ. ಮಹಿಳಾ ತಂಡದ ಜೊತೆ ಇನ್ನೂ ಕೆಲವು ಮಹಿಳೆಯರಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಪರ ಗಲ್ಲಿಗಲ್ಲಿಗಳಲ್ಲಿ ಪ್ರಚಾರ ಕಾರ್ಯ ನಡೆಯುತ್ತಿದ್ದು ಕಾಂಗ್ರೆಸ್ ಗೆಲ್ಲಲೇಬೇಕು ಎಂಬ ಹಠದಲ್ಲಿ ಕಾರ್ಯಕರ್ತರಿದ್ದಾರೆ.

LEAVE A REPLY

Please enter your comment!
Please enter your name here