ಪಾಣಾಜೆ ಕೋಟೆಯಲ್ಲಿ ಚುನಾವಣಾ ಬಹಿಷ್ಕಾರ ಫಲಕ – ಚನಿಲ ತಿಮ್ಮಪ್ಪ ಶೆಟ್ಟಿ ನೇತೃತ್ವದಲ್ಲಿ ಮನವೊಲಿಕೆ, ಫಲಕ ತೆರವು

0

ಪಾಣಾಜೆ: ಇಲ್ಲಿನ ಕೋಟೆ ಪರಿಸರದ ಜನರು ಈ ಬಾರಿ ಚುನಾವಣೆಯ ಬಹಿಷ್ಕಾರದ ಫಲಕವನ್ನು ಅಳವಡಿಸಿ‌ದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಯವರು ಸಂಬಂಧಿಸಿದ ಫಲಾನುಭವಿಗಳ ಜೊತೆ ಮಾತನಾಡಿ ಭರವಸೆ ನೀಡಿ ಚುನಾವಣಾ ಬಹಿಷ್ಕಾರದ ನಿರ್ಧಾರವನ್ನು ಹಿಂಪಡೆಯುವಂತೆ ಮನವೊಲಿಸಿದ್ದಾರೆ.‌ ‘ಮತದಾನ ಬಹಿಷ್ಕಾರ, ಯಾವುದೇ ರಾಜಕೀಯ ನಾಯಕರುಗಳಿಗೆ ಮತ ಕೇಳುವ ಅಧಿಕಾರವಿಲ್ಲ. ಕೋಟೆ – ಪಾಣಾಜೆ’ ಎಂದು ಬರೆಯಲಾಗಿದ್ದ ಫಲಕ ಅಳವಡಿಸಲಾಗಿತ್ತು. ಮನವೊಲಿಕೆಯ ಬಳಿಕ ಬಹಿಷ್ಕಾರದ ಫಲಕವನ್ನು ತೆರವುಗೊಳಿಸಲಾಯಿತು.


ಈ ವೇಳೆ ಪ್ರಮುಖರಾದ ಅಚ್ಚುತ ನಾಯಕ್, ಪಾಣಾಜೆ ಗ್ರಾಮದ ಬಿಜೆಪಿ ಚುನಾವಣಾ ಪ್ರಭಾರಿ ರವೀಂದ್ರ ಭಂಡಾರಿ, ಪಾಣಾಜೆ ಗ್ರಾ.ಪಂ. ಮಾಜಿ ಸದಸ್ಯ ರಘುನಾಥ ಪಾಟಾಳಿ, ಪ್ರಮುಖರಾದ ಸಂತೋಷ್ ರೈ ಗಿಳಿಯಾಲು, ಜಯಕುಮಾರ್ ರೈ ಕೋಟೆ, ಪುಷ್ಪರಾಜ್ ರೈ ಕೋಟೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here