ಪೆರುವಾಯಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

0

ಬಡವರಿಗೆ ಮನೆ ಕೊಡದೆ ವಂಚಿಸಿದ ಬಿಜೆಪಿ ಸರಕಾರ: ಅಶೋಕ್ ರೈ


ಪುತ್ತೂರು: ಬಸವ ವಸತಿ ಸೇರಿದಂತೆ ವಿವಿಧ ಯೋಜನೆಯಡಿ ಗ್ರಾಪಂ ಮೂಲಕ ಗ್ರಾ‌ಮಸ್ಥರಿಗೆ ನೀಡುತ್ತಿದ್ದ ಮನೆಯನ್ನು ರಾಜ್ಯದ ಬಿಜೆಪಿ ಸರಕಾರ ಬಡವನಿಗೆ ನೀಡದೆ ವಂಚಿಸಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಮ್ ರೈ ಆರೋಪಿಸಿದರು.


ಬಿಜೆಪಿ ಕಾರ್ಯಕರ್ತರು‌ ಕಾಂಗ್ರೆಸ್ ಬರುವುದಾದರೆ ಸ್ವಾಗತವಿದೆ. ಭಯ ಪಡಬೇಡಿ ನಿಮ್ಮ ಶಾಸಕರಿರುವಾಗಲೇ ನಿಮ್ಮ ಕೆಲಸ ಆಗಲಿಲ್ಲ, ಅಕ್ರಮ ಸಕ್ರಮ ಫೈಲ್ ಮಾಡಿಕೊಡಲಿಲ. ನಾನು ಶಾಸಕನಾದರೆ ಪಕ್ಷ ಬೇದವಿಲದೆ ಎಲ್ಲರಿಗೂ ನೆರವು ನೀಡುತ್ತೇನೆ. ಅಶೋಕ್ ರೈ ಎಂದಿಗೂ ಮೋಸ ಮಾಡುವುದಿಲ್ಲ. ಕೊಟ್ಟ ಮಾತನ್ನು ತಪ್ಪಲಾರೆ ಎಂದು ಹೇಳಿದರು.‌ನನ್ನ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅಶೋಕರು ಗೆದ್ದರೆ ಅವರೊಟ್ಟಿಗೆ ಹೋಗಬಹುದು ಎಂದು ಕೆಲವರು ಹೇಳುತ್ತಿದ್ದಾರೆ. ಗೆದ್ದರೆ ಕಾಂಗ್ರೆಸ್ ನಲ್ಲೇ ಇರುವೆ ಎಲ್ಲರ ಸೇವೆ ಮಾಡುವೆ ವಿನ ದುಷ್ಡ ಬುದ್ದಿ ನನಗಿಲ್ಲ. ನನ್ನ ತಂದೆ ಶಾಲೆ ಮೇಸ್ಟ್ರು ಆಗಿದ್ದರು. ಮೇಸ್ಡ್ರ ಮಗ ಯಾರ ಮನಸ್ಸಿಗೂ ನೋವು ಕೊಟ್ಟಿಲ್ಲ‌,ಕೊಡುವುದೂ ಇಲ್ಲ ಎಂದು ಹೇಳಿದರು.

LEAVE A REPLY

Please enter your comment!
Please enter your name here