ಕುಂಜೂರು:ದುರ್ಗಾಪರಮೇಶ್ವರಿ ದೇವಸ್ಥಾನದ `ಕುಂಜೂರು ಸಿರಿ’ ತುಳು ಭಕ್ತಿಗೀತೆಗಳ ವಿಡಿಯೋ ಬಿಡುಗಡೆ

0

ಪುತ್ತೂರು: ಏಕದಂತ ಕ್ರಿಯೇಷನ್ಸ್ ಪೆರ್ಲ ಇದರ ವತಿಯಿಂದ ನಿರ್ಮಾಣಗೊಂಡ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪೌರಾಣಿಕತೆ ಹಿನ್ನೆಲೆ ಆಧಾರಿತ ತುಳು ಭಕ್ತಿಗೀತೆ `ಕುಂಜೂರ ಸಿರಿ’ ಮೇ.2ರಂದು ನಡೆದ ವರ್ಷಾವಧಿ ಜಾತ್ರೋತ್ಸವದ ಸಂದರ್ಭದಲ್ಲಿ ಬಿಡುಗಡೆಗೊಂಡಿತು.


ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರದೀಪಕೃಷ್ಣ ಬಂಗಾರಡ್ಕ ಹಾಗೂ ಅರ್ಚಕ ಸದಾನಂದ ರವಿ ಭಟ್ ಬಿಡುಗಡೆಗೊಳಿಸಿದರು. ರೇಖಾ ಜಾಣಪ್ಪ ನಾಯ್ಕ ಮಚ್ಚಿಮಲೆ ನಿರ್ಮಾಣದ, ರಮೇಶ್ ಕುರೆಡ್ಕ ಸಾಹಿತ್ಯದಲ್ಲಿ ಪ್ರಶಾಂತ್ ಕುರೆಡ್ಕ ಹಾಡಿರುವ ಈ ತುಳು ಭಕ್ತಿಗೀತೆಗಳು ನಿರ್ಮಾಣಗೊಂಡಿದೆ.


ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಲಿಂಗ ನಾಯ್ಕ, ವಿಶ್ವನಾಥ ಕುಲಾಲ್, ಚಂದಪ್ಪ ಪೂಜಾರಿ, ಉಮಾವತಿ, ಲೀಲಾವತಿ, ಶುಭಕರ ರಾವ್, ಜಾಣಪ್ಪ ನಾಯ್ಕ, ರಮೇಶ್ ಕುರೆಡ್ಕ, ಪ್ರಶಾಂತ್ ಕುರೆಡ್ಕ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here