ಘೋಷಣೆಗೆ ಮೊದಲೇ ಉಪ್ಪಿನಂಗಡಿಯಲ್ಲಿ ಕಾಂಗ್ರೆಸ್ ವಿಜಯೋತ್ಸವ

0

ಉಪ್ಪಿನಂಗಡಿ: ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರು ಗೆಲುವು ಸಾಧಿಸಿದ ಬಗ್ಗೆ ಅಧಿಕೃತ ಘೋಷಣೆಯಾಗುವ ಮೊದಲೇ ಹಾಗೂ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಭಾರೀ ಮುನ್ನಡೆಯನ್ನು ಸಾಧಿಸಿದ್ದು, ಸರಕಾರ ರಚಿಸುವ ಭರವಸೆ ಮೂಡಿದ ಬೆನ್ನಲ್ಲೆಯೇ ಉಪ್ಪಿನಂಗಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಂಭ್ರಮಾಚರಣೆ ಆಚರಿಸಿದರಲ್ಲದೆ, ವಿಜಯೋತ್ಸವ ಮೆರವಣಿಗೆ ನಡೆಸಿದರು.


ಈ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸೋಮನಾಥ, ಕಾಂಗ್ರೆಸ್ ಮುಖಂಡರಾದ ತೌಸೀಫ್ ಯು.ಟಿ., ಶಬೀರ್ ಕೆಂಪಿ, ಅಶ್ರಫ್ ಅಂಬೊಟ್ಟು, ಉಮೇಶ್ ಗಾಣಿಗ, ಸಿದ್ದೀಕ್ ಕೆಂಪಿ, ಆಚಿ ಕೆಂಪಿ, ಪಿಲಿಗೂಡು ಮೋನು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here